Advertisement

15 ಲಕ್ಷ ಯಾವಾಗ ಬರುತ್ತೆ?

10:26 AM Apr 24, 2018 | Team Udayavani |

ಹೊಸದಿಲ್ಲಿ: 2014ರಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದಂತೆ 15 ಲಕ್ಷ ರೂಪಾಯಿಗಳನ್ನು ಸಾರ್ವಜನಿಕರ ಖಾತೆಗೆ ಯಾವಾಗ ಜಮೆ ಮಾಡಲಾಗುತ್ತದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಹಿತಿ ಆಯೋಗವು, ಇದು ಮಾಹಿತಿ ವ್ಯಾಪ್ತಿಗೆ ಬರದು ಎಂದಿದೆ. ಮೋಹನ್‌ ಕುಮಾರ್‌ ಶರ್ಮಾ ಎಂಬ ಆರ್‌.ಟಿ.ಐ. ಕಾರ್ಯಕರ್ತರು ಈ ಅರ್ಜಿ ಸಲ್ಲಿಸಿದ್ದರು. ಈ ಪ್ರಶ್ನೆಗೆ ಪ್ರಧಾನಿ ಕಚೇರಿ ಮತ್ತು ಆರ್‌.ಬಿ.ಐ. ಸೂಕ್ತ ಪ್ರತಿಕ್ರಿಯೆ ನೀಡಿಲ್ಲ ಎಂದು ಶರ್ಮಾ ವಿಚಾರಣೆಯ ವೇಳೆ ಹೇಳಿದ್ದರು. ದಾಖಲೆ ರೂಪದಲ್ಲಿರುವ ಅಂಶವನ್ನು ಮಾತ್ರವೇ ಮಾಹಿತಿ ಎಂದು ಪರಿಗಣಿಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next