Advertisement

ಭಾರತ ವಿರುದ್ಧ ನಾವು ದುರ್ಬಲರು: ಪೊಲಾರ್ಡ್‌!

09:45 AM Dec 05, 2019 | Sriram |

ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಡಿ. 6 ರಿಂದ 22ರವರೆಗೆ ತಲಾ ಮೂರು ಪಂದ್ಯಗಳ ಟಿ20 ಹಾಗೂ ಏಕದಿನ ಕ್ರಿಕೆಟ್‌ ಸರಣಿ ನಡೆಯಲಿದ್ದು, ಭಾರತವೇ ಸರಣಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ ಆದರೆ ಫ‌ಲಿತಾಂಶ ಏನುಬೇಕಾದರೂ ಆಗಬಹುದು ಎಂದು ವೆಸ್ಟ್‌ ಇಂಡೀಸ್‌ ತಂಡದ ನಾಯಕ ಕೈರನ್‌ ಪೊಲಾರ್ಡ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ನಾವು ಪ್ರಬಲ ಎದುರಾಳಿಯ ವಿರುದ್ಧ ಆಡಲು ಬಂದಿದ್ದೇವೆ. ದುರ್ಬಲರೆನಿಸಿಕೊಂಡಿದ್ದೇವೆ. ಅದು ಹಾಗಿರಲಿ. ಆದರೆ, ನೀವು ಇಲ್ಲಿ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಬೇಕಿದೆ. ಎಂದು ಸರಣಿ ಆರಂಭಕ್ಕೂ ಮೊದಲೇ ಪೊಲಾರ್ಡ್‌ ಸಹ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ’.

ಆಫ್ಘಾನಿಸ್ಥಾನದ ವಿರುದ್ಧದ ಸರಣಿಗೆ ಕಡಿಮೆ ಅವಧಿಯಲ್ಲಿ ನಾವು ಯಾವ ರೀತಿ ಅಭ್ಯಾಸ ಆರಂಭಿಸಿದ್ದೆವೋ ಅದಕ್ಕಿಂತ ಹೆಚ್ಚಿನ ಅಭ್ಯಾಸ ಭಾರತ ವಿರುದ್ಧದ ಸರಣಿಗೆ ಅಗತ್ಯವಾಗಿದೆ ನಾವು ಎಷ್ಟು ಕಠಿನ ಅಭ್ಯಾಸದಲ್ಲಿ ತೊಡಗುತ್ತೇವೊ ಅಷ್ಟು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಪೊಲಾರ್ಡ್‌ ತಂಡದ ಸದಸ್ಯರೀಗೆ ಕಿವಿಮಾತು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next