Advertisement

ಭಾರತ್‌ ಬ್ಯಾಂಕ್‌ ಘಾಟ್ಕೋಪರ್ ಪಶ್ಚಿಮ ಶಾಖೆ: 43ನೇ ಸಂಸ್ಥಾಪನ ದಿನಾಚರಣೆ

02:44 PM Aug 27, 2021 | Team Udayavani |

ಘಾಟ್‌ಕೋಪರ್‌: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಚಾಲಿತ ಭಾರತ್‌ ಬ್ಯಾಂಕ್‌ನ ಘಾಟ್ಕೋಪರ್ ಪಶ್ಚಿಮ ಶಾಖೆಯಲ್ಲಿ ಆ. 21ರಂದು 43ನೇ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಸಿಎ ಕಿಶೋರ್‌ ಎಚ್‌. ಗಡ, ಡಾ| ಹರಿಸಿಂಗ್‌ ಸೋಲಂಕಿ, ಸಿಎ ಪ್ರಮೋದ್‌ ಕುಮಾರ್‌ ತ್ರಿವೇದಿ, ರಂಗನಟ, ನಿರ್ದೇಶಕ ನಾರಾಯಣ ನಂದಳಿಕೆ, ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗದ ಅಧ್ಯಕ್ಷೆ ಶಾಂತಾ ನಾರಾಯಣ್‌ ಶೆಟ್ಟಿ ಮೊದಲಾದವರು ದೀಪ ಪ್ರಜ್ವಲಿಸಿ, ಕೇಕ್‌ ಕತ್ತರಿಸಿ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.

ಇದನ್ನೂ ಓದಿ:ಬಣವಿ ಒಟ್ಟುವಂತಿಲ್ಲ..ಭೆರಣಿ ತಟ್ಟುವಂತಿಲ್ಲ!ನಗರವೆಂಬ ಹಳ್ಳಿ ವಾರ್ಡುಗಳ ಅಭಿವೃದ್ಧಿ ವ್ಯಥೆ |

ಘಾಟ್ಕೋಪರ್ ಪಶ್ಚಿಮ ಶಾಖೆಯ ಪ್ರಬಂಧಕಿ ಭಾರತಿ ಕಲ್ಯಾಣಪುರ ಸ್ವಾಗತಿಸಿದರು. ಉಪ ಪ್ರಬಂಧಕಿ ಶಿಲ್ಪಾ ಕೆ. ಕರ್ಕೇರ, ಅಧಿಕಾರಿಗಳಾದ ಸಂಗೀತಾ ಅಂಚನ್‌, ರಾಜೇಶ್‌ ಜೆ. ಬಂಗೇರ, ವೈಶಾಲಿ ಜೆ. ಪಾಟೀಲ್‌, ವೀಣಾ ಎಸ್‌. ಸುವರ್ಣ, ಜಿತೇಶ್‌ ಬಿ. ಕೋಟ್ಯಾನ್‌, ಸಿಬಂದಿ ಶಶಿಕಲಾ ಬಂಗೇರ, ಉಷಾ ಆರ್‌. ಕೋಟ್ಯಾನ್‌, ಗೀತಾಂಜಲಿ ಜಾಧವ್‌, ರೀಮಾ ಹೇಮಂತ್‌, ಶ್ರೀಕಾಂತ್‌ ಮೆಂಡನ್‌, ವಿನೀತ್‌ ಶೆಟ್ಟಿ, ಸೌಮ್ಯಾ ಪೂಜಾರಿ, ನಮಿತಾ ನಾನಾ ಪವಾರ್‌, ಕರುಣಾಕರ್‌ ಬಿ. ಅಂಚನ್‌, ನಾಗೇಶ್‌ ಪಿ. ಅಮೀನ್‌, ಬಿಡಿಡಿ ಏಜೆಂಟ್‌ ಶಿವಪ್ಪ ಪೂಜಾರಿ, ಜಯರಾಮ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next