Advertisement

West Bengal; ಒತ್ತುವರಿ ತೆರವುಗೊಳಿಸಿದ ಮಹಿಳಾ ಅಧಿಕಾರಿಗೆ ಸಚಿವನ ಬೆದರಿಕೆ

12:40 AM Aug 04, 2024 | Team Udayavani |

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅರಣ್ಯ ಒತ್ತುವರಿ ತೆರವು ಗೊಳಿಸಿದ ಮಹಿಳಾ ಅಧಿಕಾರಿ ಮತ್ತು ತಂಡವನ್ನು ಸಚಿವ ಅಖೀಲ್‌ ಗಿರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಚಿವ ಗಿರಿ ಸ್ಥಳೀಯರ ಜತೆ ಅಧಿಕಾರಿಗೆ ಬೆದರಿಕೆ ಹಾಕುತ್ತಿರುವುದು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದೆ. ತಾಜ್‌ಪುರದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನಲ್ಲಿ ನಿರ್ಮಿಸಿದ್ದ ಅಂಗಡಿ ಗಳನ್ನು ತೆರವುಗೊಳಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next