Advertisement

Sourav Ganguly ಭದ್ರತೆಯನ್ನು ಹೆಚ್ಚಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧಾರ

11:28 AM May 17, 2023 | Team Udayavani |

ಕೋಲ್ಕತ್ತಾ: ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಭದ್ರತೆಯನ್ನು ಪಶ್ಚಿಮ ಬಂಗಾಳ ಸರ್ಕಾರವು ಮೇಲ್ದರ್ಜೆಗೆ ಏರಿಸಲಿದೆ.

Advertisement

ಇದುವರೆಗೆ ಸರ್ಕಾರದಿಂದ ‘ವೈ’ ಕೆಟಗರಿ ಭದ್ರತೆ ಪಡೆಯಲು ಅರ್ಹರಾಗಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ಇನ್ನು ಮುಂದೆ ಝಡ್ -ಕೆಟಗರಿ ಭದ್ರತೆ ಸಿಗಲಿದೆ.

ಸೌರವ್ ಗಂಗೂಲಿಗೆ ಭದ್ರತೆಯನ್ನು ಹೆಚ್ಚಿಸುವಂತೆ ಬಂಗಾಳ ಸರ್ಕಾರ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದೆ.

ಹೊಸ ಭದ್ರತಾ ವ್ಯವಸ್ಥೆ ಪ್ರಕಾರ, ಮಾಜಿ ಕ್ರಿಕೆಟಿಗನಿಗೆ 8 ರಿಂದ 10 ಪೊಲೀಸ್ ಸಿಬ್ಬಂದಿಯ ಕಾವಲು ಇರಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇತರ ಸೆಲೆಬ್ರಿಟಿಗಳು ಮತ್ತು ಕ್ರೀಡಾ ವ್ಯಕ್ತಿಗಳು ದೇಶಾದ್ಯಂತ ಅಂತಹ ಭದ್ರತೆಯನ್ನು ಪಡೆಯುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next