Advertisement

ಪ್ರವಾಹಕ್ಕೆ ಪಶ್ಚಿಮ ಬಂಗಾಲದಲ್ಲಿ 152 ಸಾವು

07:50 AM Aug 22, 2017 | Team Udayavani |

ಲಕ್ನೋ/ಮಾಲ್ಡಾ: ಭೀಕರ ಪ್ರವಾಹಕ್ಕೆ ಪಶ್ಚಿಮ ಬಂಗಾಲ ಮತ್ತು ಉತ್ತರ ಪ್ರದೇಶಗಳಲ್ಲಿ ವ್ಯಾಪಕ ಹಾನಿಯಾಗಿದ್ದು, ಒಟ್ಟು 220ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಉತ್ತರ ಪ್ರದೇಶದಲ್ಲಿ ಪ್ರವಾಹದ ಆತಂಕ ಮುಂದುವರಿದಿದ್ದು, 24 ಜಿಲ್ಲೆಗಳು ಜಲಾವೃತಗೊಂಡಿವೆ. ಒಟ್ಟು 43,602 ಮಂದಿಯನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಇತ್ತ ಪಶ್ಚಿಮ ಬಂಗಾಲದಲ್ಲಿ 1.5 ಕೋಟಿ ಮಂದಿ ಪ್ರವಾಹ ಸಂತ್ರಸ್ತರಿದ್ದು, 14 ಸಾವಿರ ಕೋಟಿಗೂ ಮಿಕ್ಕಿ ಆಸ್ತಿ ಪಾಸ್ತಿ ನಷ್ಟವಾಗಿದೆ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಷ್ಟದ ಕುರಿತ ವರದಿಯನ್ನು ಕೇಂದ್ರಕ್ಕೆ ಕಳಿಸುವುದಾಗಿ ಹೇಳಿದ್ದಾರೆ. ಗುಜರಾತ್‌, ಅಸ್ಸಾಂಗೆ ನೆರವು ನೀಡಿದ ರೀತಿ, 2 ಸಾವಿರ ಕೋಟಿ ರೂ. ನಮಗೂ ನೀಡಬೇಕೆಂದು ಆಗ್ರಹಿಸಿದ್ದಾರೆ.

Advertisement

ನೆರೆ ಸಂತ್ರಸ್ತ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್, ಸೇನೆ, ವಾಯುಪಡೆ ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ನೇಪಾಲದ ನದಿಗಳಿಂದ ನೀರು ಬಿಟ್ಟಿರುವುದು ಮತ್ತು ನದೀ ಪಾತ್ರಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದು ಕಾರ್ಯಾಚರಣೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಶರ್ದಾ, ಪಲಿಯಾ ಕಾಲನ್‌, ರಾಪ್ತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಕೇಂದ್ರ ನೀರಾವರಿ ಆಯೋಗ ವರದಿಯಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next