Advertisement

ಪ.ಬಂ. ಬಿಜೆಪಿ ಮುಖ್ಯಸ್ಥ ಘೋಷ್‌ ಮೇಲೆ ಟಿಎಂಸಿ ದಾಳಿ; ಕಾರು ಧ್ವಂಸ

04:12 PM Sep 17, 2018 | udayavani editorial |

ಕೋಲ್ಕತ : ಪಶ್ಚಿಮ ಬಂಗಾಲದ ಬಿಜೆಪಿ ಅಧ್ಯಕ್ಷ  ದಿಲೀಪ್‌ ಘೋಷ್‌ ಮತ್ತು ಅವರ ಬೆಂಬಲಿಗರ ಮೇಲೆ ಪೂರ್ವ ಮಿಡ್ನಾಪುರದಲ್ಲಿ ಇಂದು ಸೋಮವಾರ ದಾಳಿ ನಡೆಸಲಾಗಿದ್ದು ಇದು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತ ಕೃತ್ಯವೆಂದು ಆರೋಪಿಸಲಾಗಿದೆ. 

Advertisement

ವರದಿಗಳ ಪ್ರಕಾರ ಪಶ್ಚಿಮ ಬಂಗಾಲ ಬಿಜೆಪಿ ಮುಖ್ಯಸ್ಥ ಮತ್ತು ಇತರ ಕನಿಷ್ಠ ಐವರು ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಘೋಷ್‌ ಅವರ ಕಾರಿಗೆ ಕೂಡ ದಾಳಿಕೋರರು ಹಾನಿಮಾಡಿದ್ದಾರೆ. 

ತಾನು ಸಾರ್ವಜನಿಕ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ತನ್ನ ಮೇಲೆ ಈ ದಾಳಿ ನಡೆದಿದೆ ಎಂದು ಘೋಷ್‌ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. 

ಸಭಾ ತಾಣಕ್ಕೆ ಹೋಗುತ್ತಿದ್ದ ಘೋಷ್‌ ಅವರ ಜತೆಗೆ ಹೋಗಲು ಬಿಜೆಪಿ ಸದಸ್ಯರು  ಮೋಟಾರ್‌ ಸೈಕಲ್‌ ರಾಲಿಯೊಂದನ್ನು ಏರ್ಪಡಿಸಿದ್ದರು. 

ದಾಳಿಕೋರರು ರಾಲಿಯಲ್ಲಿ ಭಾಗವಹಿಸಿದವರ ಮೇಲೆ ಕೂಡ ದಾಳಿ ಮಾಡಿದ್ದಾರೆ. ಬಿಜೆಪಿ ಮುಖ್ಯಸ್ಥರು ಮತ್ತು ಅವರ ಬೆಂಬಲಿಗರ ಮೇಲೆ ದಾಳಿಕೋರರು ಕಲ್ಲೆಸೆತ ನಡೆಸಿದ್ದಾರೆ. 

Advertisement

ಈ ದಾಳಿಗೆ ಕಾಂಠಿ ಕ್ಷೇತ್ರದ ಟಿಎಂಸಿ ಸಂಸದ ದ್ವಿವೇಂದು ಅಧಿಕಾರಿ ಅವರೇ ಕಾರಣ ಎಂದು ಘೋಷ್‌ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಅಧಿಕಾರಿ ಅಲ್ಲಗಳೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next