Advertisement

ರಜೆಯಲ್ಲಿ ನಾಮಪತ್ರ ಸಲ್ಲಿಸಲು ಹೋದರು!

07:00 AM Oct 14, 2018 | Team Udayavani |

ಜಮಖಂಡಿ: ಜಮಖಂಡಿ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಶನಿವಾರ ರಜೆಯಿದ್ದರೂ ನಾಮಪತ್ರ ಸಲ್ಲಿಸಲು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ್ದರು. 

Advertisement

ವಿಶೇಷ ಪೂಜೆ ಬಳಿಕ ಶುಭ ಮುಹೂರ್ತದಲ್ಲಿ ಶನಿವಾರ ನಾಮಪತ್ರ ಸಲ್ಲಿಕೆಗೆ ತೆರಳಿದರು. ಕೇಂದ್ರ ಚುನಾವಣಾ ಅಧಿಕಾರಿಗಳು ಹೊರಡಿಸಿದ ಆದೇಶದಂತೆ ನಾಮಪತ್ರ ಸಲ್ಲಿಕೆಗೆ 2ನೇ ಹಾಗೂ 4ನೇ ಶನಿವಾರ ಸರ್ಕಾರಿ ರಜೆ ಇರುವುದರಿಂದ ಅವಕಾಶ ಇರುವುದಿಲ್ಲ ಎಂದು ಉಪವಿಭಾಗಾ ಧಿಕಾರಿ ಆದೇಶ ಪತ್ರ ತೋರಿಸಿದರು.

ಒಂದು ನಾಮಪತ್ರ ಸಲ್ಲಿಕೆ: ಉಪಚುನಾವಣೆಗೆ ಹಿರೇಪಡಸಲಗಿ ಗ್ರಾಮದ ರವಿ ಶಿವಪ್ಪ ಪಡಸಲಗಿ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿ ಕಾರಿ ಮೊಹಮ್ಮದ ಶರೀಫ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next