Advertisement
ಸತತ ಕಾರ್ಯಾಚರಣೆಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬಂದಿಗಳು ಪಂಪ್ಸೆಟ್ ಮೂಲಕ ಬಾವಿಯ ನೀರು ಖಾಲಿ ಮಾಡಿ, ಕ್ರೇನ್ ತರಿಸಿ ಬಾವಿಗಿಳಿದು ರಕ್ಷಣೆಗೆ ಪ್ರಯತ್ನಿಸಿದರು, ಈ ಸಂದರ್ಭ ಪ್ರತಿರೋಧ ತೋರಿದ್ದರಿಂದ ರಕ್ಷಣೆ ಅಸಾಧ್ಯವಾಯಿತು. ಮತ್ತೆ ನೀರು ಖಾಲಿ ಮಾಡುವ ಕಾರ್ಯ ಮುಂದುವರಿಯಿತು ಹಾಗೂ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಯಿತು.
ಮೊದಲು ಸ್ಥಳೀಯವಾಗಿ ಲಭ್ಯವಿರುವ ಅರಿವಳಿಕೆ ಮದ್ದು ಪ್ರಯೋಗಿಸಿ ಪ್ರಜ್ಞೆ ತಪ್ಪಿಸಲು ಪ್ರಯತ್ನಿಸಲಾಯಿತು. ನಾಲ್ಕು ಬಾರಿ ಅರಿವಳಿಕೆ ನೀಡಿದರೂ ಪ್ರಜ್ಞೆ ತಪ್ಪಿಸಲು ಸಾಧ್ಯವಾಗಲಿಲ್ಲ. ಅನಂತರ ಪಿಳಿಕುಳದಿಂದ ತಜ್ಞರನ್ನು ಸ್ಥಳಕ್ಕೆ ಕರೆಸಿಕೊಂಡು ಕಾರ್ಯಾಚರಣೆ ಆರಂಭಿಸಲಾಯಿತು. ನಾಲ್ಕು ಬಾರಿ ಅರೆವಳಿಕೆ ನೀಡಿದ ಬಳಿಕ ಪ್ರಜ್ಞೆ ತಪ್ಪಿತು. ಸ್ಥಳೀಯರ ನೆರವು
ಕಾಡುಕೋಣ ಪ್ರಜ್ಞೆ ತಪ್ಪುತ್ತಿದ್ದಂತೆ ಬಾವಿಗಿಳಿದ ಮುಳುಗು ತಜ್ಞ ಮಂಜುನಾಥ ನಾಯ್ಕ ಕೊಡ್ಲಾಡಿ, ಗೋಪಾಲ ಮಡಿವಾಳ, ಸುಧೀರ್, ನರಸಿಂಹ ನಾಯ್ಕ ಬಾವಿಯಿಂದ ಮೇಲೆತ್ತಲು ಸಾಕಷ್ಟು ಶ್ರಮಿಸಿದರು. ಅನಂತರ ಕ್ರೇನ್ ಮೂಲಕ ಮೇಲಕ್ಕೆ ತಂದು ಲಾರಿಯಲ್ಲಿ ಸಾಗಿಸಿ ಸ್ಥಳೀಯ ಕಾಡಿಗೆ ಬಿಡಲಾಯಿತು.
Related Articles
Advertisement