Advertisement

Mangaluru: ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

07:48 PM Apr 11, 2024 | Team Udayavani |

ಮಂಗಳೂರು: ಮನೆಯ ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿ ಮಹಿಳೆಗೆ ಮರುಜೀವ ನೀಡಿದ್ದಾರೆ.

Advertisement

ಸುಮಾರು 58 ವರ್ಷ ವಯಸ್ಸಿನ ಮಹಿಳೆ ಸಂಜೆ ವೇಳೆ ನೀರು ಸೇದುತ್ತಿದ್ದಾಗ ತಲೆ ಸುತ್ತು ಬಂದಂತೆ ಆಗಿ ಬಾವಿಗೆ ಬಿದ್ದರು. ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು.

ಬಾವಿಯಲ್ಲಿ ಎಂಟು ಅಡಿಗಳಿಗೂ ಹೆಚ್ಚು ನೀರಿತ್ತು. ಮಹಿಳೆ ಪಂಪ್ ನ ಹಗ್ಗ ಹಿಡಿದುಕೊಂಡು ನಿಂತಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ರಾಜೀವ, ಪ್ರಮುಖ ಅಗ್ನಿಶಾಮಕ ಚಂದ್ರಹಾಸ ಸಾಲ್ಯಾನ್, ಅಗ್ನಿಶಾಮಕರಾದ ದಯಾಕರ, ಪುನೀತ್, ಶಿವರಾಜ್, ಪವನ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Wayanad; ರಾಹುಲ್ ಗಾಂಧಿ ನಿಷೇಧಿತ ಪಿಎಫ್‌ಐ ಬೆಂಬಲ ಪಡೆದಿದ್ದಾರೆ: ಸ್ಮೃತಿ ಇರಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next