Advertisement

ಸಾಹುಕಾರನ ಕೊರಳಿಗೆ ಎರಡು ಕ್ವಿಂಟಲ್ ಆ್ಯಪಲ್‌ ಹಾರ

03:16 PM Nov 15, 2019 | Team Udayavani |

ಬೆಳಗಾವಿ: ಚುನಾವಣೆಗೆ ನಿಲ್ಲಲು ಅರ್ಹ ಎನಿಸಿಕೊಂಡು ಬಿಜೆಪಿಯ ಅಭ್ಯರ್ಥಿಯಾದ ಗೋಕಾಕ್ ನ ಸಾಹುಕಾರ ರಮೇಶ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯ ತವರು ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಅವರ ಅಭಿಮಾನಿಗಳು ಎರಡು ಕ್ವಿಂಟಲ್ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.

Advertisement

ಬಿಜೆಪಿಗೆ ಸೇರ್ಪಡೆಗೊಂಡು ಶುಕ್ರವಾರ ತವರು ಜಿಲ್ಲೆಗೆ ಆಗಮಿಸಿದ ರಮೇಶ ಜಾರಕಿಹೊಳಿ ಅವರನ್ನುಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ಸೇಬು ಹಣ್ಣಿನ ಹಾರವನ್ನು ಕ್ರೇನ್ ಮೂಲಕ ಹಾಕಿ ಸ್ವಾಗತಿಸಿಕೊಂಡರು.

ತೆರೆದ ವಾಹನದಲ್ಲಿಗೋಕಾಕ ನಗರದ ಪ್ರಮುಖ ಬೀದಿಗಳಲ್ಲಿ ರಮೇಶ ಅವರ ಮೆರವಣಿಗೆ ಮಾಡಲಾಯಿತು. ಪುತ್ರ ಅಮರನಾಥ ತಂದೆಗೆ ಸಾಥ್ ನೀಡಿದರು.

ಮೆರವಣಿಗೆ ಮುಗಿಸಿ ನೇರವಾಗಿ ಗೋಕಾಕನ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ವೇದಿಕೆ ಹತ್ತಿದರು. ನಿವಾಸದಎದುರು ಹಾಕಿರುವ ಬೃಹತ್ ವೇದಿಕೆಯಲ್ಲಿ ಸ್ವಾಗತ ಸಮಾರಂಭ ಆರಂಭಗೊಂಡಿದ್ದು,ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next