Advertisement

ನರೇಂದ್ರಗೆ ವೀರೇಂದ್ರ ಸ್ವಾಗತ

06:40 AM Oct 30, 2017 | Harsha Rao |

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ 11 ಗಂಟೆಗೆ ಧರ್ಮಸ್ಥಳಕ್ಕೆ ಆಗಮಿಸಿದರು. ಕಾರಿನಿಂದ ಇಳಿಯುತ್ತಿದ್ದಂತೆಯೇ ಎಲ್ಲರಿಗೂ ಹಾಯ್‌ ಹೇಳಿದರು. ಅವರನ್ನು ರಜತ ಕಲಶ ಹಿಡಿದು ಮಂಗಲ ವಾದ್ಯಗಳೊಂದಿಗೆ ಸ್ವಾಗತಿಸಲಾಯಿತು. ನರೇಂದ್ರ ಮೋದಿ ಅವರನ್ನು ಡಿ. ವೀರೇಂದ್ರ ಹೆಗ್ಗಡೆ ಅವರು ಬರಮಾಡಿಕೊಂಡರು. ಬಳಿಕ ಹೆಗ್ಗಡೆ ಯವರ ಕುಟುಂಬದವರ ಜತೆಗೆ ಛಾಯಾಚಿತ್ರ ತೆಗೆಸಿಕೊಂಡರು.

Advertisement

ಛಾಯಾಚಿತ್ರ ತೆಗೆಯಲು ಅನುಮತಿ ಕೊಟ್ಟುದಕ್ಕೆ ಹೆಗ್ಗಡೆ ಕುಟುಂಬದವರು ಮೋದಿ ಅವರಿಗೆ ಧನ್ಯವಾದ್‌ ಎಂದರು. ಅದಕ್ಕೆ ಅವರು ಕೂಡ ಪ್ರತಿ ವಂದನೆ ಸಲ್ಲಿಸಿದರು. ವೀರೇಂದ್ರ ಹೆಗ್ಗಡೆ ಅವರ ಜತೆ ಪ್ರತ್ಯೇಕವಾಗಿ ಔಪ ಚಾರಿಕ ಮಾತುಕತೆ ನಡೆಸಿದರು. ಪೂರ್ವ ನಿಗದಿ ಯಂತೆ ದೇವಾಲಯದ ಅಂಗಣದಲ್ಲಿ ವಿಶೇಷವಾಗಿ ಸಿದ್ಧ ಪಡಿಸಿದ ಕೊಠಡಿಯಲ್ಲಿ ಕುರ್ತಾ ತೆಗೆದು ತಾವೇ ತಂದಿದ್ದ ಕೇಸರಿ ಬಣ್ಣದ ಶಾಲು ಹೊದ್ದುಕೊಂಡರು.

ದೇವರ ಹುಂಡಿಗೆ ಕಾಣಿಕೆ ಹಾಕಿದ ಮೋದಿ ಅನಂತರ ತಮಗಾಗಿ ಸಿದ್ಧಪಡಿ ಸಿದ ಲಿಂಬೆ ಶರಬತ್ತನ್ನು ಸೇವಿಸಿ ಒಣ ಹಣ್ಣು ಗಳನ್ನು ಸ್ವೀಕರಿಸಿದರು. ಅವರು ಫಲಾಹಾರ, ಉಪಾಹಾರ ಇತ್ಯಾದಿ ಗಳನ್ನು ಹೊರಗೆ ಸ್ವೀಕರಿಸುವ ಪದ್ಧತಿ ಇಟ್ಟು ಕೊಳ್ಳದ ಕಾರಣ ಉಪಾ ಹಾರದ ವ್ಯವಸ್ಥೆ ಮಾಡಿರ ಲಿಲ್ಲ. ಮಧ್ಯಾಹ್ನದ ಊಟ ವಿಮಾನ ದಲ್ಲೇ ಮಾಡಿದರು.

ವಂದನೆ
ದೇವಾಲಯದ ಹೊರಗಿನ ಕ್ಯೂ ಲೈನ್‌ ಹಾಗೂ ಪ್ರವಚನ ಮಂಟಪದಲ್ಲಿ ಮುನ್ನೂರಕ್ಕಿಂತ ಅಧಿಕ ಮಂದಿ ದೇವಾಲಯದ ಸಿಬಂದಿ ಮೋದಿ ಅವರನ್ನು ಕಾಣಲು ನಿಂತಿದ್ದರು. ಅವರೆಲ್ಲರಿಗೂ ವಂದನೆ ಸಲ್ಲಿಸಿದರು. ಅನಂತರ ಉಜಿರೆಗೆ ನಿರ್ಗಮಿಸಿದರು. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಚಿತ್ರವನ್ನು ಮೋದಿ ಟ್ವೀಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿ ಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next