Advertisement

ಉಡುಪಿ : ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ನಡೆಯುತ್ತಿದ್ದ ವಾರದ ಸಂತೆ ರದ್ದು

04:35 PM May 26, 2021 | Team Udayavani |

ಉಡುಪಿ : ಕೋವಿಡ್-19 2ನೇ ಅಲೆ ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣ, ಸಾರ್ವಜನಿಕರ ಹಿತದೃಷ್ಟಿಯಿಂದ ಸೋಂಕನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಉಡುಪಿ ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಜಿಲ್ಲಾಧಿಕಾರಿಗಳ ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿರುತ್ತದೆ.

Advertisement

ಮುಂದುವರೆದು, ದಿನಾಂಕ 25-05-2021 ರಿಂದ ದಿನಾಂಕ:07-06-2021 ರವರೆಗೆ (ಬುಧವಾರ, ಶನಿವಾರ ಹಾಗೂ ಭಾನುವಾರ) ವಾರದಲ್ಲಿ ಒಟ್ಟು 03 ದಿನಗಳ ಕಾಲ ಸಗಟು/ಚಿಲ್ಲರೆ ವ್ಯಾಪಾರ ವಹಿವಾಟನ್ನು ನಿಷೇಧಿಸಲಾಗಿರುತ್ತದೆ.  ಸಾರ್ವಜನಿಕರು/ವ್ಯಾಪಾರಸ್ಥರು ಸಹಕರಿಸಬೇಕಾಗಿ APMC ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next