Advertisement

Weather ಬಿಸಿಲಿನ ಹೊಡೆತಕ್ಕೆ ಮೊದಲ ಸಾವು

11:53 PM Mar 31, 2024 | Team Udayavani |

ಮಾನ್ವಿ: ರಾಜ್ಯದಲ್ಲಿ ಬಿಸಿಲು ತೀವ್ರವಾಗಿದೆ. ಹಲವು ಜಿಲ್ಲೆಗಳು ಕುದಿಯುವ ಸ್ಥಿತಿಯಲ್ಲಿವೆ. ಇದೇ ಹೊತ್ತಿನಲ್ಲಿ ತಾಪಮಾನದಿಂದಾಗಿ ರಾಜ್ಯದಲ್ಲಿ ಮೊದಲ ಸಾವು ಸಂಭವಿಸಿದೆ.

Advertisement

ಶನಿವಾರ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಯುವಕನೊಬ್ಬ ತಾಪದಿಂದ ಮೃತಪಟ್ಟಿದ್ದಾನೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಚಿಮ್ಮಡ್‌ ಗ್ರಾಮದ ಶ್ರೀಶೈಲ (21) ಮೃತ ಯುವಕ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್ಲೆಲ್ಲಿ ಗರಿಷ್ಠ ತಾಪಮಾನ?
ಬಾಗಲಕೋಟೆ: 41.2 ಡಿಗ್ರಿ ಸೆ.
ಕಲಬುರಗಿ: 40.9 ಡಿಗ್ರಿ ಸೆ.
ವಿಜಯನಗರ: 39.5 ಡಿಗ್ರಿ ಸೆ.
ಗದಗ: 39.7 ಡಿಗ್ರಿ ಸೆ.
ರಾಯಚೂರು: 39.6 ಡಿಗ್ರಿ ಸೆ.

 

Advertisement

Udayavani is now on Telegram. Click here to join our channel and stay updated with the latest news.

Next