Advertisement

ಮೋದಿ ಸರಕಾರದಿಂದ ಆಧಾರ್‌ ಕಡ್ಡಾಯ ಅಸ್ತ್ರ : ರಾಹುಲ್‌ ಟೀಕೆ

10:57 AM Jan 18, 2018 | Team Udayavani |

ಹೊಸದಿಲ್ಲಿ : ನಾಗರಿಕರ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಆಧಾರ್‌ ಅನ್ನು ಕಡ್ಡಾಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

Advertisement

ಯುಪಿಎ ಸರಕಾರದಡಿ ಆಧಾರ್‌, ನಾಗರಿಕರನ್ನು ಶಕ್ತಗೊಳಿಸುವ ಸ್ವಯಂ ಪ್ರೇರಣೆಯ ಉಪಕರಣವಾಗಿತ್ತು. ಆದರೆ ಎನ್‌ಡಿಎ ಸರಕಾರದಡಿ ಆಧಾರ್‌ ನಾಗರಿಕರನ್ನು ನಿಶ್ಶಕ್ತೀಕರಿಸುವ ಕಡ್ಡಾಯ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ. 

ಆಧಾರ್‌ ನಂಬರನ್ನು ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆ ಮತ್ತು ಸರಕಾರಿ ಯೋಜನೆಗಳಿಗೆ ಜೋಡಿಸುವುದು ಜನರಿಗೆ ಸಂವಿಧಾನದತ್ತ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತದೆಯೇ ಎಂಬುದನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಎತ್ತಿಕೊಂಡಿರುವ ನಡುವೆಯೇ ರಾಹುಲ್‌ ಗಾಂಧಿ ಆಧಾರ್‌ ಕುರಿತ ಮೋದಿ ಸರಕಾರದ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. 

ನಿನ್ನೆ ಬುಧವಾರದ ವಿಚಾರಣೆಯಲ್ಲಿ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಆಧಾರ್‌ನಿಂದ ಪೌರ ಹಕ್ಕುಗಳ ಅವಸಾನವಾಗುತ್ತದೆ ಎಂದು ವಾದಿಸಿದ್ದಾರೆ. ವಿಚಾರಣೆ ಇಂದು ಮುಂದುವರಿಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next