Advertisement

“ಸಿರಿವಂತ ದೇಗುಲಗಳಿಂದ ಬಡ ದೇಗುಲ ದತ್ತು’

03:45 AM Feb 10, 2017 | |

ಕೋಟ: ರಾಜ್ಯದಲ್ಲಿ ಸಾವಿರಾರು ಹಿಂದುಳಿದ ದೇವಾಲಯಗಳಿದ್ದು ಅವುಗಳನ್ನು ಅಭಿವೃದ್ಧಿ ಹೊಂದಿದ ದೇಗುಲಗಳ ಮೂಲಕ ದತ್ತು ಪಡೆದು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಮುಜರಾಯಿ ಮತ್ತು ಜವುಳಿ ಖಾತೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ತಿಳಿಸಿದರು.

Advertisement

ಅವರು ಗುರುವಾರ ಕೋಟ ಅಮೃತೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯದ ಪ್ರಮುಖ ದೇಗುಲಗಳಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ ಕೆಲವೆಡೆ ಸರಿಯಾಗಿ ಬಳಸಿಲ್ಲ. ಇಲ್ಲಿ ಬಳಸದ ಹಣವನ್ನು 2 ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ ದೇಗುಲಗಳ ಅಭಿವೃದ್ಧಿಗೆ ಉಪಯೋಗಿಸುವಂತೆ ತಿಳಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next