Advertisement

ಬೀದಿ ಬೀದಿಯಲ್ಲಿ ಕೃಷ್ಣಾಷ್ಟಮಿ ಮಾಡುತ್ತೇವೆ : ವೇದವ್ಯಾಸ ಕಾಮತ್ ಆಕ್ರೋಶ

09:02 PM Sep 06, 2023 | Team Udayavani |

ಸುರತ್ಕಲ್ : ‘ಪೊಲೀಸ್ ಇಲಾಖೆಯ ಮುಖಾಂತರ ಅಷ್ಟಮಿಗೆ ಬ್ರೇಕ್ ಹಾಕಲು ಸರಕಾರ ಮುಂದಾಗಿದ್ದು ಹಿಂದೂ ಧಾರ್ಮಿಕತೆಗೆ ಅಡ್ಡಿಯಾಗುತ್ತಿದೆ’ ಎಂದು ಶಾಸಕ ವೇದವ್ಯಾಸ ಕಾಮತ್ ಬುಧವಾರ ಕಿಡಿಕಾರಿದ್ದಾರೆ.

Advertisement

‘ಅಷ್ಟಮಿ ಆಚರಣೆಗೆ ಸಮಿತಿಯ ಪದಾಧಿಕಾರಿಗಳು ಫೋಟೋ ಕೊಡಬೇಕು.ಪೊಲೀಸ್ ಇಲಾಖೆ ಮೂಲಕ ಅಡ್ಡಗಾಲು ಹಾಕಲಾಗುತ್ತಿದ್ದು,ಉತ್ಸವ ನಡೆಸುವವರನ್ನೂ ಕಳ್ಳ ಕಾಕರಂತೆ ನೋಡಲಾಗುತ್ತಿದೆ.10 ಗಂಟೆಯ ಒಳಗೆ ನಿಲ್ಲಿಸಲು ಸೂಚನೆ ನೀಡಲಾಗಿದೆ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

‘ನಾವೂ ಕೂಡ ನಿಮ್ಮದೊಂದಿಗೆ ಇದ್ದೇವೆ.ನಮ್ಮ ದೇವರ ಉತ್ಸವಕ್ಕೆ ಅಡ್ಡಿ ಯಾಕೆ? ನಿಮ್ಮ ಆದೇಶ ಲೆಕ್ಕಕ್ಕಿಲ್ಲ. ಸೋಲು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಕಿಡಿ ಕಾರಿದ್ದಾರೆ.

‘ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಗೊತ್ತಾಗುತ್ತದೆ, ನಮ್ಮ ಹಿಂದೂ,ಸನಾತನ ಧಾರ್ಮಿಕ ಕಾರ್ಯಕ್ಕೆ ತೊಂದರೆ ಕೊಡುವುದೇ ಕೆಲಸ.ತೊಂದರೆ ಮಾಡಿದರೆ ಬೀದಿ ಬೀದಿಯಲ್ಲಿ ಕೃಷ್ಣಾಷ್ಟಮಿ ಮಾಡುತ್ತೇವೆ.ನಮ್ಮತನ ಬಿಟ್ಟು ಕೊಡುವುದಿಲ್ಲ’ ಎಂದು ವೇದವ್ಯಾಸ ಕಾಮತ್ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next