Advertisement
ಆದರೆ, ಶಾಲೆ ಕಾಲೇಜಿಗೆ ಹೋಗುವ ಧಾವಂತದಲ್ಲಿ ಮಕ್ಕಳು ಆಯತಪ್ಪಿ ಬಿದ್ದರೆ ರಸ್ತೆಗೆ, ಅದು ಮಿಸ್ ಆಗಿ, ಹಿಂದಿನ ಬಸ್ಸಲ್ಲಿ ಹೋಗಿ ಲೇಟಾ ದರೆ ಕ್ಲಾಸಿಂದ ಹೊರಗೆ. ಇದು ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳ ಸ್ಥಿತಿ.
Related Articles
Advertisement
ಬಸ್ಗಳಿಗೂ ಮಿತಿ ಮೀರಿದ ಒತ್ತಡ!
ನೆರೆಯ, ಫೆರಿಯಡ್ಕ, ಗಂಡಿ ಬಾಗಿಲು ಇಲ್ಲಿಂದ ಉಜಿರೆ ಮತ್ತು ಬೆಳ್ತಂಗಡಿಗೆ ಹೋಗುವಂತಹ ವಿದ್ಯಾರ್ಥಿಗಳಿಗೆ ಬಸ್ಸುಗಳು ವ್ಯವಸ್ಥೆ ಇದೆ. ಕಕ್ಕಿಂಜೆ-ಬಸ್ತಿ- ಸೋಮಂತಡ್ಕವಾಗಿ ಧರ್ಮಸ್ಥಳ ಸಾಗುವ ರಸ್ತೆಯಲ್ಲಿ ನೂರಕ್ಕೂ ಅಧಿಕ ಮಕ್ಕಳಿದ್ದಾರೆ. ಮತ್ತೂಂದೆಡೆ ಪೆರಿಯಡ್ಕ – ನೆರಿಯ -ಗಂಡಿಬಾಗಿಲು – ಧರ್ಮಸ್ಥಳ ಸಾಗುವ ರಸ್ತೆಯಲ್ಲಿ 80ಕ್ಕೂ ಅಧಿಕ ಮಕ್ಕಳಿದ್ದಾರೆ.
ಈ ಮಾರ್ಗವಾಗಿ ಬೆಳಗ್ಗೆ 8.15ಕ್ಕೆ ಬರುವ ಬಸ್ ಆರಂಭದಿಂದ ಬಸ್ ನಿಲ್ದಾಣದಿಂದಲೇ ಫುಲ್, ಕೊನೆಗೆ ಬಸ್ ಸ್ಪೆಪ್ವರೆಗೂ ನೇತಾಡಿಕೊಂಡೇ ಬರುತ್ತಾರೆ. ಬಸ್ತಿ, ಕಕ್ಕಿಂಜೆ, ಬೆಂದ್ರಾಳ, ಚಿಬಿದ್ರೆ ನಡುವೆ ಇರುವ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ. ಆ ಬಸ್ ಮಿಸ್ ಆಯಿತೆಂದರೆ ಮತ್ತೆ 9 ಗಂಟೆಗೆ ಬಸ್. ಅದು ಉಜಿರೆ ಕಾಲೇಜಿಗೆ 9.30ಕ್ಕೆ ತಲುಪುತ್ತದೆ. ಪದವಿ ತರಗತಿಗಳು 9ಕ್ಕೆ ಆರಂಭವಾಗುತ್ತದೆ. ಅಲ್ಲಿ ತೆರಳಿದರೆ ತರಗತಿಯಿಂದ ಹೊರಗಿರಬೇಕು. ಪ್ರಸಕ್ತ ಕಾಲೇಜಿಗೆ ರಜೆ, ಜೂನ್ 24ರಿಂದ ಕಾಲೇಜು ಆರಂಭ ವಾಗುತ್ತದೆ. ಈ ಸಮಸ್ಯೆ ನಿರಂತರ.
ಮಳೆಗಾಲದಲ್ಲಂತೂ ಕೆಸರು ಮಯ, ಸಮವಸ್ತ್ರ ಕೆಸರುಮಯ, ನಾವು ತರಗತಿಗೆ ಹೇಗೆ ತೆರಳುವುದು ಎಂಬುದು ಮಕ್ಕಳ ಅಳಲು. ಇದರ ಬಗ್ಗೆ ಹಲವಾರು ಬಾರಿ ತಿಳಿಸಿದರು ಯಾವುದೇ ರೀತಿಯ ಪ್ರತಿಕ್ರಿಯೆ ಇಲ್ಲ. ಬಸ್ತಿಯಿಂದ ಧರ್ಮಸ್ಥಳಕ್ಕೆ ಬೆಳಗ್ಗೆ ಮತ್ತು ಸಂಜೆ ಕಾಲೇಜು ಮತ್ತು ಶಾಲೆಗೆ ಹೋಗುವ ಹೊತ್ತಿಗೆ ಹೆಚ್ಚುವರಿ ಒಂದು ಬಸ್ ಬಿಟ್ಟರೆ ಅನುಕೂಲ ಎನ್ನುತ್ತಾರೆ ಪೋಷಕರು.
ಕಾಲೇಜು ಶುರುವಾದ ಮೇಲೆಯೇ ಬರುವ ಬಸ್!
- ಬೆಳಾಲುನಿಂದ ಉಜಿರೆಗೆ 3 ಬಸ್ ಗಳು ಇದ್ದು ಮೂರು ಬಸ್ಸಲ್ಲಿಯೂ ನೇತಾಡಿಕೊಂಡು ಬರುವ ಪರಿಸ್ಥಿತಿ.
- ಪುತ್ತೂರು ಉಜಿರೆ ಮಾರ್ಗವಾಗಿ ಬರುವ ಬಸ್ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಉಜಿರೆಯಲ್ಲಿ ಶಾಲೆ 9 ಗಂಟೆಗೆ ಆರಂಭವಾದರೆ, ಬಸ್ 9.20ಗೆ ಬರುವ ಸ್ಥಿತಿ ಇದೆ.
- ಮೂಡುಬಿದಿರೆ-ವೇಣೂರು ಮಾರ್ಗವಾಗಿ ಸರಿಯಾದ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆ ಇಲ್ಲ.
- ಉಜಿರೆ-ಗುರುವಾಯನಕೆರೆ- ನಾರಾವಿ ಮಾರ್ಗವಾಗಿ ಕೇವಲ ಒಂದು ಸರಕಾರಿ ಬಸ್ ಇದೆ. ಆ ಮಾರ್ಗವಾಗಿ ಬರುವ ವಿದ್ಯಾರ್ಥಿ ಗಳ ಸಂಖ್ಯೆ ನೂರಾರು ಸಂಖ್ಯೆಯಲ್ಲಿ ದ್ದಾರೆ. ಇಲ್ಲಿ ಖಾಸಗಿ ಬಸ್ಗಳೇ ಮಕ್ಕಳನ್ನು ಪೊರೆಯುವುದು.
- ಧರ್ಮಸ್ಥಳ-ಉಜಿರೆ-ಮಡಂತ್ಯಾರು-ಪುಂಜಾಲಕಟ್ಟೆ ಮಾರ್ಗವಾಗಿ ಬೆಳಗ್ಗೆ 7.30 ರಿಂದ 9 ಗಂಟೆವರೆಗೆ ಇರುವ ಬಸ್ ಫುಲ್ ರಶ್. ಮಕ್ಕಳು, ಉದ್ಯೋಗಿಗಳು ಎಲ್ಲರೂ ಇದರಲ್ಲೇ ಹೋಗಬೇಕು.