Advertisement

ಕಾಂಗ್ರೆಸ್‌ ತನ್ನ ನಾಯಕತ್ವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು: ಶಶಿ ತರೂರ್‌ ಸಲಹೆ

10:03 AM Feb 25, 2020 | Hari Prasad |

ನವದೆಹಲಿ: ಪಕ್ಷ ‘ದಿಕ್ಕು ದೆಸೆ ಇಲ್ಲದೆ ಸಾಗುತ್ತಿದೆ’ ಎಂದು ಜನ ಭಾವಿಸುವ ಮೊದಲೇ ಕಾಂಗ್ರೆಸ್‌ ತನ್ನ ನಾಯಕತ್ವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಪಕ್ಷದ ಹಿರಿಯ ನಾಯಕ ಶಶಿ ತರೂರ್‌ ಸಲಹೆ ನೀಡಿದ್ದಾರೆ. ಹಾಗೇ ‘ದೀರ್ಘಾವಧಿ ಅಧ್ಯಕ್ಷ’ರ ಕುರಿತ ಅನಿಶ್ಚಿತತೆಯನ್ನು ಪರಿಹರಿಸುವುದು ಪಕ್ಷದ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

Advertisement

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಸಲಹೆ ನೀಡಿರುವ ತರೂರ್‌, ಮತ್ತೆ ಕಾಂಗ್ರೆಸ್‌ ಅಧ್ಯಕ್ಷರಾಗಿ ಮುಂದುವರಿಯುವ ಕುರಿತು ರಾಹುಲ್‌ ಗಾಂಧಿಯೇ ನಿರ್ಧ ರಿಸಬೇಕು. ಒಂದೊಮ್ಮೆ ಹುದ್ದೆಯಿಂದ ಕೆಳಗಿಳಿಯುವ ಈ ಹಿಂದಿನ ನಿರ್ಧಾರದಿಂದ ಅವರು ಹಿಂದೆ ಸರಿಯದಿದ್ದರೆ, ಒಬ್ಬ ‘ಕ್ರಿಯಾ ಶೀಲ ಹಾಗೂ ಪೂರ್ಣಾವಧಿಯ ನಾಯಕ’ನನ್ನು ನೇಮಿಸಿ, ಪಕ್ಷ ಕಟ್ಟುವ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

‘ಒಡೆದಾಳುವ ನೀತಿ’ ಅನುಸರಿಸುತ್ತಿರುವ ಬಿಜೆಪಿಗೆ ದೇಶದಲ್ಲಿ ಕಾಂಗ್ರೆಸ್‌ ಒಂದೇ ಪರ್ಯಾಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಮುಖ್ಯವಾಗಿ ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿದ ಕೆಲವು ನ್ಯೂನತೆಗಳನ್ನು ಸರಿಪಡಿಸಿ ಕೊಳ್ಳುವ ತುರ್ತು ಅಗತ್ಯವಿದೆ ಎಂದು ತರೂರ್‌ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ವೈಯಕ್ತಿಕ ಅಹಂಗಳು ಹಾಗೂ ಮಹತ್ವಾಕಾಂಕ್ಷೆಗಳನ್ನು ಬಿಟ್ಟು, ಒಗ್ಗಟ್ಟಾಗುವುದರಿಂದಷ್ಟೇ ಕಾಂಗ್ರೆಸ್‌ ಮತ್ತೆ ಚೇತರಿಕೆ ಕಾಣಲು ಸಾಧ್ಯ ಎಂದು ಪಕ್ಷದ ಮತ್ತೂಬ್ಬ ನಾಯಕ ಜೈರಾಂ ರಮೇಶ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next