Advertisement

ಮೋದಿ ಸರಕಾರ ಸೋಲಿಸಿ ದೇಶ, ಪ್ರಜಾಸತ್ತೆ ಉಳಿಸಿ: ಹಾರ್ದಿಕ್‌ ಕರೆ

11:18 AM Jan 19, 2019 | Team Udayavani |

ಕೋಲ್ಕತ : ದೇಶ ಮತ್ತು ಪ್ರಜಾಸತ್ತೆಯನ್ನು ಉಳಿಸಲು ಕೇಂದ್ರದಲ್ಲಿನ ಭ್ರಷ್ಟ ನರೇಂದ್ರ ಮೋದಿ ಸರಕಾರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಗುಜರಾತಿನ ಪಾಟಿದಾರ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಇಂದಿಲ್ಲಿ ನಡೆದ ಬಿಜೆಪಿಯೇತರ ವಿರೋಧ ಪಕ್ಷಗಳ ಬೃಹತ್‌ ರಾಲಿಯಲ್ಲಿ ಕರೆ ನೀಡಿದರು. 

Advertisement

ವಿರೋಧ ಪಕ್ಷಗಳನ್ನು ಒಗ್ಗೂಡಿಸಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪ್ರಯತ್ನವನ್ನು ಪ್ರಶಂಸಿಸಿ ಬಿಜೆಪಿ ಯನ್ನು ಸೋಲಿಸಲು ಆಕೆ ನೀಡಿರುವ ಕರೆಯನ್ನು ಎಲ್ಲರೂ ಬೆಂಬಲಿಸಿ ಆಕೆಯ ಕನಸನ್ನು ನನಸುಗೊಳಿಸಬೇಕು ಎಂದು ಪಟೇಲ್‌ ಹೇಳಿದರು. 

ಸುಭಾಷ್‌ ಚಂದ್ರ ಬೋಸ್‌ ಅವರು ಸ್ವಾತಂತ್ರ್ಯ ಹೋರಾಟದಲ್ಲಿ “ಗೋರೋ’  (ಬಿಳಿಯರ) ವಿರುದ್ದ ಹೋರಾಡಲು ಕರೆ ನೀಡಿದ್ದರು; ಈಗ ಚೋರೋ (ಚೋರರ) ವಿರುದ್ಧ ಹೋರಾಡಲು ನಾವು  ಕರೆ ನೀಡುತ್ತಿದ್ದೇವೆ ಎಂದು ಪಟೇಲ್‌ ಗುಡುಗಿದರು. 

Advertisement

Udayavani is now on Telegram. Click here to join our channel and stay updated with the latest news.

Next