Advertisement

Politics: ಹಿಂದಿನ ಸರ್ಕಾರದಲ್ಲಿ ಏನೇನು ತಿಂದಿದ್ದಾರೆ ಗೊತ್ತಿದೆ: ತಂಗಡಗಿ

06:30 PM Oct 14, 2023 | Team Udayavani |

ಕೊಪ್ಪಳ: ಬಿಜೆಪಿಯವರಿಗೆ ಐಟಿ, ಇಡಿ, ಸಿಬಿಐ ಬಿಟ್ಟರೆ ಬೇರೇನೂ ಇಲ್ಲ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕರ ಮನೆ ಮೇಲೆ ದಾಳಿಯೇ ನಡೆಯಲ್ಲ. ಅವರ ಮನೆಯಲ್ಲಿ ಏನೂ ಇಲ್ವಾ? ಹಿಂದಿನ ಸರ್ಕಾರದಲ್ಲಿ ಅವರು ಏನೇನು ತಿಂದಿದ್ದಾರೆ ಎಂದು ಎಲ್ಲವೂ ಜನರಿಗೆ ಗೊತ್ತಿದೆ. ದೆಹಲಿಯಲ್ಲಿ ಆಪ್‌, ಕರ್ನಾಟಕದಲ್ಲಿ ಕಾಂಗ್ರೆಸ್‌, ಆಂಧ್ರದಲ್ಲಿ ಅವರಿಗೆ ಚಂದ್ರಬಾಬು ನಾಯ್ಡು ಮಾತ್ರ ಕಾಣುತ್ತಾರೆ. ನಮ್ಮದು ಎಟಿಎಂ ಸರ್ಕಾರ ಎನ್ನುವುದಕ್ಕೆ ಅವರು ಪ್ರೂಫ್‌ ಕೊಡಲಿ.

Advertisement

ತಪ್ಪಿದ್ದರೆ ಹೇಳಲಿ ತಿದ್ದಿಕೊಳ್ಳುತ್ತೇವೆ. 42 ಕೋಟಿ ಸಿಕ್ಕಿರೋದನ್ನು ನಾನು ಸಮರ್ಥಿಸಿಕೊಳ್ಳಲ್ಲ. ತೆರಿಗೆ ವಂಚನೆ ಮಾಡುವವರ ಮನೆ ಮೇಲೆ ಐಟಿ ದಾಳಿಯಾಗಲಿ. ಮೊದಲು ಬಿಜೆಪಿಯವರ ಮನೆ ಮೇಲೆ ದಾಳಿ ನಡೆಯಲಿ. ಬಿಜೆಪಿಯವರಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಅದೇ ರೀತಿ ಕಾಣಬೇಕು. ವಿದ್ಯುತ್‌ ಅಭಾವವಿದೆ. ಹೀಗಾಗಿ ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್‌ ಆಗುತ್ತಿದೆ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ಮಟ್ಕಾ, ಇಸ್ಪೀಟ್‌ ಆಟ ಬಂದ್‌ ಮಾಡಿಸಿದ್ದೇವೆ. ನಿಗಮ-ಮಂಡಳಿಗೆ ಆದಷ್ಟು ಬೇಗ ನೇಮಕ ನಡೆಯುತ್ತದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next