Advertisement

ನಮ್ಮ ಶಾಸಕರನ್ನು ಎಲ್ಲೇ ಕೂಡಿ ಹಾಕಿದರೂ ಕರೆ ತರುತ್ತೇವೆ ; ಡಿಕೆಶಿ

05:22 AM Jan 15, 2019 | |

ಬೆಂಗಳೂರು: ಆಪರೇಷನ್‌ ಕಮಲ ಭೀತಿಯಲ್ಲಿರುವ ಕಾಂಗ್ರೆಸ್‌ ಭಾರೀ ಪ್ರತಿತಂತ್ರಗಳನ್ನು ಹಣೆಯುತ್ತಿದ್ದು, ಅಸಮಾಧಾನಿತ ಶಾಸಕರನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮತ್ತು ಸಚಿವ ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಎನ್ನಲಾದ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಪ್ರತಿತಂತ್ರಗಳನ್ನು ಹಣೆಯುತ್ತಿದ್ದಾರೆ. 

Advertisement

 ಸಚಿವ ಡಿಕೆಶಿ ಭೇಟಿಯಾದ ಆನಂದ್‌ ಸಿಂಗ್‌

ಮಂಗಳವಾರ ಬೆಳಗ್ಗೆ  ವಿಜಯನಗರ ಕೈ ಶಾಸಕ ಆನಂದ್‌ ಸಿಂಗ್‌ ಅವರು ಸಚಿವ ಡಿ.ಕೆ.ಶಿವಕುಮಾರ್‌ ಅವರ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದಾರೆ. 

ನನ್ನನ್ನು ಯಾರೂ ಸಂಪರ್ಕಿಸಿಲ್ಲ, ನಾನು ಕಾಂಗ್ರೆಸ್‌ ಬಿಡುಲುದಿಲ್ಲ ಎಂದು ಅವರು ಹೇಳಿದ್ದಾರೆ. 

ಡಿಕೆಶಿ ಕಿಡಿ 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ ಅವರು ನಮ್ಮ ಶಾಸಕರನ್ನು ಬಿಜೆಪಿಯವರು ಎಲ್ಲೇ ಅಡಗಿಸಿ ಇಟ್ಟರೂ ನಾವು ಕರೆತರುತ್ತೇವೆ.ಅಷ್ಟು ಶಕ್ತಿ ನಮಗೆ ಇದೆ ಎಂದು ಕಿಡಿ ಕಾರಿದ್ದಾರೆ. 

ಕೆ.ಸಿ.ವೇಣುಗೋಪಾಲ್‌ ರಣತಂತ್ರ 
ಆಪರೇಷನ್‌ ಕಮಲ ನಡೆಯುವ ಭಯದಲ್ಲಿರುವ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಕೆ.ಕೆ.ಗೆಸ್ಟ್‌ ಹೌಸ್‌ನಲ್ಲಿ ರಣತಂತ್ರಗಳನ್ನು ಹಣೆಯುತ್ತಿದ್ದಾರೆ. ಗೆಸ್ಟ್‌ ಹೌಸ್‌ಗೆ ಡಿಕೆಶಿ ಅವರು ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next