Advertisement

ಕಾಂಗ್ರೆಸ್ ನವರು ನಮಗೆ ನೈತಿಕತೆಯ ಪಾಠ ಮಾಡುವ ಅಗತ್ಯ ಇಲ್ಲ : ಸಚಿವ ಆರ್ ಆಶೋಕ್

04:06 PM Nov 13, 2019 | Team Udayavani |

ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನಿಂದ ನಿರಾಳರಾಗಿದ್ದೇವೆ. ಅನರ್ಹರಿಗೆ ಅನ್ಯಾಯವಾಗಲು ಬಿಡಲ್ಲಎಲ್ಲರಿಗೂ ಟಿಕೇಟ್ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಆಶೋಕ್ ಹೇಳಿದರು.

Advertisement

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಅನರ್ಹರಿಗೆ ಮತ್ತೆ ಶಾಸಕರಾಗಿ ಆಯ್ಕೆಯಾಗಲು ಯಾವ ಅಡೆತಡೆಯೂ ಇಲ್ಲ. ಈಗ ಅವರಿಗೆ ಮಂತ್ರಿಯಾಗಲು ಅವಕಾಶ ಇಲ್ಲ.  ಅದಕ್ಕಿಂತ ಮುಖ್ಯ ವಾಗಿ ಅವರಿಗೆ ಈಗ ಚುನಾವಣೆಗೆ ಸ್ಪರ್ಧೆಗೆ ಅವಕಾಶ ಕೊಟ್ಟಿದೆ‌. ನಾವು ಉಪಚುನಾವಣೆಯ ಎಲ್ಲಾ ಕ್ಷೇತ್ರದಲ್ಲೂ ಗೆಲ್ಲಲ್ಲಿದ್ದೇವೆ ಎಂದರು.

ನಮ್ಮ ಪಕ್ಷದಲ್ಲಿ ಯಾವ ಅಸಮಾಧಾನವೂ ಇಲ್ಲ ಯಾರು ಟಿಕೇಟ್ ಸಿಗದ್ದಕ್ಕೆ ಪಕ್ಷ ಬಿಡಲ್ಲ.ಈಗ ಭಿನ್ನಮತ ಇರೋದು ಜೆಡಿಎಸ್ ಕಾಂಗ್ರೆಸ್ ನಲ್ಲಿ ಮಾತ್ರ. ಕಾಂಗ್ರೆಸ್ ನವರು ನಮಗೆ ನೈತಿಕತೆಯ ಪಾಠ ಮಾಡುವುದಲ್ಲ.  ಅವರು ಕುದುರೆ ವ್ಯಾಪಾರ, ಪಕ್ಷಾಂತರದಲ್ಲಿ ಸೆಂಚುರಿ ಬಾರಿಸಿದವರು.  ಅವರು ನಮ್ಮ ಬಗ್ಗೆ ಹೇಳುವುದಕ್ಕೆ  ಯಾವ ನೈತಿಕತೆಯೂ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next