Advertisement

“ಕೋವಿಡ್ 19 ಮುಗಿಯುವವರೆಗೆ ನಮ್ಮೂರಿಗೆ ಪ್ರವೇಶವಿಲ್ಲ’

10:20 PM Apr 15, 2020 | Sriram |

ಕುಂದಾಪುರ: ಕೋವಿಡ್ 19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತಗಳು ಗಡಿ, ಚೆಕ್‌ಪೋಸ್ಟ್‌ಗಳನ್ನು ನಿರ್ಬಂಧಿಸಿರುವುದು ಗೊತ್ತೇ ಇದೆ. ಹೀಗೆಯೇ ಮರವಂತೆಯ ಹೊರ ಬಂದರು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕರಾವಳಿ ವಾರ್ಡ್‌ಗೆ ಹೆದ್ದಾರಿಯಿಂದ ಪ್ರವೇಶಿಸುವ ಮಾರ್ಗವನ್ನು ಅಲ್ಲಿನ ಜನರೇ ತಾತ್ಕಾಲಿಕ ತಡೆಬೇಲಿ ಹಾಕಿ ಬಂದ್‌ ಮಾಡಿ ಫಲಕ ಹಾಕಿ ಕೋವಿಡ್ 19 ವೈರಸ್‌ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ.

Advertisement

“ಮರವಂತೆ ನಾಗರಿಕರ ಹಿತದೃಷ್ಟಿಯಿಂದ ಕೋವಿಡ್ 19 ವೈರಸ್‌ ಸಂಪೂರ್ಣವಾಗಿ ಹೋಗುವವರೆಗೆ ಸ್ಥಳೀಯ ಮೀನು ವ್ಯಾಪಾರಸ್ಥರನ್ನು ಹೊರತುಪಡಿಸಿ ಹಾಗೂ ಯಾವುದೇ ಹೊರಗಿನ ವ್ಯಾಪಾರಸ್ಥರು, ವ್ಯಕ್ತಿಗಳಿಗೆ ನಮ್ಮ ಕರಾವಳಿ ವಾರ್ಡ್‌ ಗೆ ಪ್ರವೇಶವಿಲ್ಲ’ ಎಂದು ಫ‌ಲಕದಲ್ಲಿ ಬರೆಯಲಾಗಿದೆ. ಈ ಮಾರ್ಗ ಬಂದರು ಸಂಪರ್ಕಿಸುವ ರಸ್ತೆಯಾಗಿದ್ದು, ನಾಡದೋಣಿ ಮೀನುಗಾರಿಕೆಯೂ ಆರಂಭ ವಾಗಿರುವುದರಿಂದ ಹೊರಗಿನವರು ಎಲ್ಲೆಲ್ಲಿಂದಲೋ ಬರುತ್ತಾರೆ ಎನ್ನುವ ಕಾರಣಕ್ಕೆ ಊರಿನವರೇ ಜಾಗ್ರತೆ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next