Advertisement

ರಸ್ತೆಯಲ್ಲಿರುವ ನಾಯಿ ಬೊಗಳಿದ್ರೆ ತಲೆ ಕೆಡಿಸಿಕೊಳ್ಳುವುದಿಲ್ಲ

01:59 PM Jan 20, 2018 | |

ಬಳ್ಳಾರಿ: ‘ನಾವು ಹೇಳಿ ಕೇಳಿ ಹಠವಾದಿಗಳು. ಯಾವುದೋ ರಸ್ತೆಯಲ್ಲಿರುವ ನಾಯಿ ಬೊಗಳಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ’  ಇದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ತಮ್ಮದೆ ಶೈಲಿಯಲ್ಲಿ ವಿರೋಧಿಗಳ ವಿರುದ್ಧ ಶನಿವಾರ ಕಿಡಿ ಕಾರಿದ ಪರಿ .

Advertisement

ಬಳ್ಳಾರಿಯಲ್ಲಿ ಉದ್ಯೋಗ ಮೇಳ  ಉದ್ಘಾಟನೆ  ಮಾಡಿ  ಆಕ್ರೋಶ ಭರಿತರಾಗಿ  ಮಾತನಾಡಿದ ಹೆಗಡೆ ‘ನಾನು ಇಲ್ಲಿ ಮತ ಕೇಳಲು ಬಂದಿಲ್ಲ. ಭಾಷಣ ಮಾಡಲು ಬಂದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಲು ಬಂದಿದ್ದೇನೆ’ ಎಂದರು. 

‘ನಮಗೆ ಈ ಮಣ್ಣಿನ ಬಗ್ಗೆ , ಇಲ್ಲಿನ ಧರ್ಮದ ಗೌರವ ವಿದೆ ಜನರತ್ತು ಎತ್ತಿ ನಿಲ್ಲಿಸಬೇಕು’ ಎನ್ನುವ ಛಲ ವಿದೆ ಎಂದರು. 

‘ಬಳ್ಳಾರಿಯಲ್ಲಿ ಕೌಶಲ್ಯ ಅಭಿವೃದ್ಧಿ ವಿವಿ ತೆರೆಯಲು ಮುಂದಾಗಿದ್ದು ಜಮೀನು ನೀಡಲು ಯಾರಾದರು ಮುಂದೆ ಬಂದರೆ ನಾವು ಮಾತುಕತೆ ನಡೆಸಲು ಸಿದ್ದರಿದ್ದೇವೆ’ ಎಂದರು. 

ಸಮಾರಂಭದಲ್ಲಿ ಸಂಸದ ಶ್ರೀರಾಮುಲು ಸೇರಿದಂತೆ ಗಣ್ಯರು  ಉಪಸ್ಥಿತರಿದ್ದರು. 

Advertisement

ದಲಿತ ಸಂಘಟನೆಗಳಿಂದ ಮುತ್ತಿಗೆ 

ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಸಚಿವ ಹೆಗಡೆ ಅವರ ಕಾರಿಗೆ ದಲಿತ ಸಂಘಟನೆಯ ನೂರಾರು ಕಾರ್ಯಕರ್ತರು ಮುತ್ತಿಗೆ ಹಾಗಿ  ಆಕ್ರೋಶ ವ್ಯಕ್ತ ಪಡಿಸಿದರು. ಕಪ್ಪು ಬಾವುಟಗಳನ್ನು ಪ್ರದರ್ಶಿಸಿ ಸಂವಿಧಾನ ವಿರೋಧಿ ಅನಂತ್‌ ಕುಮಾರ್‌ ಹೆಗಡೆಗೆ ಧಿಕ್ಕಾರ ಎಂಬ  ಘೋಷಣೆಗಳನ್ನು ಕೂಗಿದರು.

ಸಂಸದ ಶ್ರೀರಾಮುಲು ಅವರು ಕಾರಿನಿಂದ ಇಳಿದು ಬಂದು ಪ್ರತಿಭಟನಾ ನಿರತರ ಮನವೊಲಿಸಲು ಯತ್ನಿಸಿದರು.

ಸ್ಥಳದಲ್ಲಿದ್ದ ನೂರಾರು ಪೊಲೀಸರು ಪ್ರತಿಭಟನಾ ನಿರತರನ್ನು ಚದುರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next