Advertisement

ಒಂದು ರಾಷ್ಟ್ರ- ಒಂದು ಚುನಾವಣೆಗೆ ನಾವು ರೆಡಿ

12:19 AM Dec 22, 2020 | mahesh |

ಹೊಸದಿಲ್ಲಿ: “ಒಂದು ರಾಷ್ಟ್ರ-ಒಂದು ಚುನಾವಣೆ’ ಪರಿಕಲ್ಪನೆಯನ್ನು ಜಾರಿಗೆ ತರಲು ನಾವು ಸಿದ್ಧರಿದ್ದೇವೆ. ಹೀಗೆಂದು ಹೇಳಿರುವುದು ಮುಖ್ಯ ಚುನಾವಣ ಆಯುಕ್ತ ಸುನೀಲ್‌ ಅರೋರಾ. ಸುದ್ದಿವಾಹಿನಿ ಯೊಂದಕ್ಕೆ ನೀಡಿರುವ ಸಂದರ್ಶ ನ ದಲ್ಲಿ ಈ ಕುರಿತು ಸ್ಪಷ್ಟಪಡಿಸಿರುವ ಅವರು, “ಶಾಸಕಾಂಗವು ಅದಕ್ಕೆ ಸಂಬಂಧಿಸಿದ ಎಲ್ಲ ರೀತಿಯ ತಿದ್ದುಪಡಿಗಳನ್ನು ತಂದರೆ, ಚುನಾವಣ ಆಯೋಗವು ಒಂದು ರಾಷ್ಟ್ರ-ಒಂದು ಚುನಾವಣೆ ನಡೆಸಲು ಸಿದ್ಧವಾಗಿದೆ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಆಯೋಗಕ್ಕಿಲ್ಲ’ ಎಂದು ತಿಳಿಸಿದ್ದಾರೆ.

Advertisement

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರೂ ಒಂದೇ ಬಾರಿಗೆ ಎಲ್ಲ ರೀತಿಯ ಚುನಾವಣೆಗಳನ್ನು ನಡೆಸುವ ಬಗ್ಗೆ ಪುನರುಚ್ಚರಿಸಿದ್ದರು. ಜತೆಗೆ ಇದು ದೇಶಕ್ಕೆ ಅತ್ಯಗತ್ಯವಾಗಿದ್ದು, ಇದರ ಬಗ್ಗೆ ಚರ್ಚೆ ನಡೆಯಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದರು.

ಇದೇ ವೇಳೆ ಭಾರತೀಯರಿಗೆ ಯಾವಾಗ ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ ಲಭ್ಯವಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅರೋರಾ, ಯುವ ಮತ್ತು ಶಿಕ್ಷಿತ ಮತದಾರರನ್ನು ಗುರಿಯಾಗಿಟ್ಟು ಕೊಂಡು ಈ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಇದು ಮುಂದಿನ ವಿತ್ತೀಯ ವರ್ಷದಲ್ಲಿ ಅಥವಾ ಇದೇ ಹಣಕಾಸು ವರ್ಷದಲ್ಲೇ ಜಾರಿಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next