Advertisement

ಶಾಕೂ ಇಲ್ಲ ಎಂತದ್ದು ಇಲ್ಲ, ತೀರ್ಪಿಗೆ ತಲೆಬಾಗಿದ್ದೇವೆ: ಸಿದ್ದರಾಮಯ್ಯ

09:24 AM May 26, 2019 | Vishnu Das |

ಹೊಸದಿಲ್ಲಿ: ಲೋಕಸಭಾ ಚುನಾವಣಾ ಫ‌ಲಿತಾಂಶ ನಮಗೆ ಶಾಕ್‌ ನೀಡಿಲ್ಲ, ಎಂತದ್ದು ಇಲ್ಲ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪಿಗೆ ತಲೆಬಾಗಲೇ ಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Advertisement

ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ , ರಾಜ್ಯ ಸರ್ಕಾರ ಸುಭದ್ರವಾಗಿದ್ದು ಯಾವುದೇ ಬದಲಾವಣೆ ಆಗುವುದಿಲ್ಲ ಎಂದರು.

ಈಗ ಸೋಲಿಗೆ ಕಾರಣ ಹುಡುಕಲಿಕ್ಕೆ ಹೋಗುವುದಿಲ್ಲ. ಜನ ಕೊಟ್ಟ ತೀರ್ಪನ್ನು ತಲೆ ಬಾಗಿ ಒಪ್ಪಿಕೊಂಡಿದ್ದೇವೆ ಎಂದರು.

ಸ್ಥಾನ ಒಂದಾಗಲಿ, ಎರಡಾಗಲಿ ವ್ಯತ್ಯಾಸ ಇಲ್ಲ, ಜನರ ತೀರ್ಪು ಒಪ್ಪಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next