Advertisement

ಸುಪ್ರೀಂ ಕೋರ್ಟ್‌ ದೇವರಲ್ಲ!

07:55 AM Sep 24, 2017 | |

ನವದೆಹಲಿ: “ನಾವು ದೇವರಲ್ಲ. ದೇವರಿಂದ ಮಾತ್ರ ಸಾಧ್ಯವಾಗುವ ಕೆಲಸಗಳನ್ನು ನೀವು ಮಾಡಿ ಎಂದು ದಯವಿಟ್ಟು ನಮ್ಮನ್ನು ಕೇಳಬೇಡಿ!’

Advertisement

ಹೀಗೆ ಹೇಳಿದ್ದು ಸುಪ್ರೀಂ ಕೋರ್ಟ್‌. ದೇಶದ ಪರಮೋತ್ಛ ನ್ಯಾಯದಾನ ಸಂಸ್ಥೆಯೇ ಹೀಗೆ ಹೇಳಿದರೆ ಜನ ತಮ್ಮ ಸಮಸ್ಯೆಯನ್ನ ಇನ್ನಾರ ಮುಂದೆ ಹೇಳಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೀರಾ? ಆದರೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಕೋರಿಕೆ ಕೇಳಿದರೆ ನ್ಯಾಯಾಲಯ ಹೇಳಿದ್ದೇ ಸರಿ ಎಂದು ನೀವು ತಲೆದೂಗುತ್ತೀರ. “ದೇಶದಲ್ಲಿ ಸೊಳ್ಳೆಗಳು ವಿಪರೀತವಾಗಿವೆ. ಅವುಗಳನ್ನು “ನಿರ್ಮೂಲನೆ’ ಮಾಡಲು ನೀವೇ ಏನಾದರೂ ಮಾಡಬೇಕು’ ಎಂದು ಧನೇಶ್‌ ಎಂಬುವರು ಅರ್ಜಿ ಸಲ್ಲಿಸಿದ್ದರು. ಶನಿವಾರ ಈ ಅರ್ಜಿ ವಿಚಾರಣೆಗೆ ಎತ್ತಿಕೊಂಡ ನ್ಯಾ. ಮೋಹನ್‌ ಬಿ. ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರಿದ್ದ ದ್ವಿಸದಸ್ಯ ಪೀಠ, “ನಿಮ್ಮ ಸಮಸ್ಯೆಯನ್ನು ಪರಿಹರಿಸಲು ದೇವರಿಂದ ಮಾತ್ರ ಸಾಧ್ಯ. ನಾವೇನೂ ದೇವರಲ್ಲ,’ ಎಂದು ಹೇಳಿ ಅರ್ಜಿಯನ್ನು ತಳ್ಳಿಹಾಕಿದೆ.

ಜಗತ್ತಿನಾದ್ಯಂತ ಪ್ರತಿ ವರ್ಷ 7.25 ಲಕ್ಷ ಮಂದಿ ಸೊಳ್ಳೆ ಕಚ್ಚಿಸಿಕೊಂಡು ಮರಣ ಹೊಂದುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ವರದಿ ನೀಡಿತ್ತು. ವಿಶ್ವದಾದ್ಯಂತ ವಿಜ್ಞಾನಿಗಳು ಏನೇ ಸಂಶೋಧನೆ ನಡೆಸಿದರೂ, ಸಾರ್ವಜನಿಕರು ಏನೇನೋ ಉಪಾಯ ಮಾಡಿದರೂ ಸೊಳ್ಳೆಗಳ ಸಂತತಿ ಮಾತ್ರ ನಾಶವಾಗುತ್ತಿಲ್ಲ. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಧನೇಶ್‌, “ಸೊಳ್ಳೆ ನಿರ್ಮೂಲನೆಗೆ ಅಧಿಕಾರಿಗಳು ಏನೂ ಮಾಡುತ್ತಿಲ್ಲ. ನೀವಾದರೂ ಅವರಿಗೆ ತಿಳಿ ಹೇಳಿ ಸೊಳ್ಳೆಗಳಿಂದ ಮುಕ್ತಿ ಕೊಡಿಸಿ,’ ಎಂದು ನ್ಯಾಯಾಲಯವನ್ನು ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next