Advertisement

ಆಪರೇಶನ್‌ ಕಮಲ ಮಾಡುತ್ತಿಲ್ಲ: ಬಿವೈಆರ್‌

01:20 AM Jan 19, 2019 | Team Udayavani |

ಬೈಂದೂರು: ಶನಿವಾರ ಸಂಜೆಯೊಳಗೆ ಬಿಜೆಪಿ ಶಾಸಕರೆಲ್ಲರೂ ತಮ್ಮ ಕ್ಷೇತ್ರಗಳಿಗೆ ವಾಪಸ್ಸಾಗುತ್ತಾರೆ. ನಾವೇನು ಆಪರೇಶನ್‌ ಕಮಲ ಮಾಡುತ್ತಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

Advertisement

ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ನಾವೇನು ಆಪರೇಶನ್‌ ಕಮಲ ಮಾಡುತ್ತಿಲ್ಲ. ಅವರದೇ ಪಕ್ಷದ ಶಾಸಕರು ತಮ್ಮನ್ನು ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಬೇಸತ್ತು ಅವರಾಗಿಯೇ ಹೊರಗಡೆ ಬಂದಿದ್ದರು ಎಂದರು.

ನಮಗಿಂತ ಕಡಿಮೆ ಸ್ಥಾನ ಪಡೆದರೂ ಸರಕಾರ ರಚಿಸಿದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ಗಳೆರಡಕ್ಕೂ ಬಿಜೆಪಿಯನ್ನುಪ್ರಶ್ನಿಸುವ ನೈತಿಕತೆಯಿಲ್ಲ. ಆರು ತಿಂಗಳಿಂದ ಸರಕಾರ ಇದೆಯೋ? ಇಲ್ಲವೋ? ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆಯೇ ಹೊರತು ಈವರೆಗೂ ರೈತರಿಗೆ ಅನುಕೂಲವಾಗಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next