Advertisement

ವಿಶ್ವಾಸಮತ ಯಾಚನೆ ಹೇಗೆ ಮಾಡ್ತೇವೆ ಎಂದು ಹೇಳಕ್ಕಾಗುತ್ತಾ?

10:17 AM Jul 13, 2019 | Vishnu Das |

ಬೆಂಗಳೂರು: ನಾವು ಚರ್ಚೆ ನಡೆಸಿಯೆ ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದೇವೆ. ಆಪರೇಷನ್‌ಗೆ ಕೈ ಹಾಕುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.

Advertisement

ಕಲಾಪ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು , ಮುಖ್ಯಮಂತ್ರಿಗಳು ಉಭಯ ಪಕ್ಷಗಳು ಚರ್ಚೆ ನಡೆಸಿದ ಬಳಿಕವೇ ವಿಶ್ವಾಸ ಮತ ಯಾಚನೆ ಮಾಡುವುದಾಗಿ ಹೇಳಿದ್ದಾರೆ. ನಮ್ಮಲ್ಲಿ ಸಂಖ್ಯಾಬಲ ಇಲ್ಲದೆ ವಿಶ್ವಾಸಮತ ಯಾಚನೆ ಮಾಡಲಿಕ್ಕಾಗುತ್ತದಾ? ಹೇಗೆ ಆಗುತ್ತದೆ ಎನ್ನುವುದು ಹೇಳುವುದಕ್ಕೆ ಆಗುತ್ತದಾ? ,ನಾವು ಆಪರೇಷನ್‌ಗೆ ಕೈ ಹಾಕುವುದಿಲ್ಲ ಎಂದರು.

ಮುಂಬಯಿಗೆ ಹೋಗಿರುವುದು 10 ಶಾಸಕರು ಮಾತ್ರ. ರಾಮಲಿಂಗಾ ರೆಡ್ಡಿ, ಎಂಟಿಬಿ ನಾಗರಾಜ್‌ ಅವರು ಮುಂಬಯಿಗೆ ಹೋಗಿಲ್ಲ, ಶಾಸಕರ ಅನರ್ಹತೆಗೆ ನಾವು ದೂರು ನೀಡಿದ್ದೇವೆ. ಆ ಬಗ್ಗೆ ಸ್ಪೀಕರ್‌ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ರೋಷನ್‌ ಬೇಗ್‌ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದ್ದು ಅವರೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದರು.

ಸಿದ್ದರಾಮಯ್ಯ ಅವರು ನಗುನಗುತ್ತಾ ವಿಧಾನಸೌಧದಿಂದ ಹೊರ ಬಂದರು. ಈ ವೇಳೆ ಸುದ್ದಿಗಾರರು ಏನು ಬಹಳ ಖುಷಿಯಾಗಿದ್ದೀರಿ ಎಂದು ಪ್ರಶ್ನಿಸಿದರು.

Advertisement

ನಾನು ಯಾವಾಗಲು ಖುಷಿಯಾಗಿಯೇ ಇರುತ್ತೇನೆ. ನಾವು ಜನಸೇವೆ ಮಾಡಲು ಬಂದವರು. ನಗುತ್ತಾ ಮಾಡಬೇಕು, ಅಳುತ್ತಾ ಮಾಡಬಾರದು ಎಂದರು.

ಮೂರು ಪಕ್ಷಗಳ ಶಾಸಕರು ರೆಸಾರ್ಟ್‌ಗೆ ಸಮ್ಮಿಶ್ರ ಸರ್ಕಾರದ ಭವಿಷ್ಯದ ಪ್ರಶ್ನೆ ಎದುರಾಗಿರುವ ವೇಳೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಜೆಡಿಎಸ್‌ ಪಕ್ಷದ ಶಾಸಕರು ರೆಸಾರ್ಟ್‌ ವಾಸ್ತವ್ಯ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next