Advertisement

ನಾವೆಲ್ಲರೂ ಅಮಾಯಕರು..: ಮಾಧ್ಯಮಗಳೆದುರು ಗೌರಿ ಹತ್ಯೆ ಆರೋಪಿಗಳು 

04:09 PM Sep 29, 2018 | Team Udayavani |

ಬೆಂಗಳೂರು: ‘ನಾವು ಅಮಾಯಕರು, ನಮಗೂ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೂ ಯಾವುದೇ ಸಂಬಂಧವಿಲ್ಲ’ ಎಂದು ಪ್ರಮುಖ ಆರೋಪಿಗಳು ಶನಿವಾರ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

Advertisement

ಪ್ರಮುಖ ಆರೋಪಿ ಪರಶುರಾಮ್‌ ವಾಗ್ಮೋರೆ ‘ನಾವು ನಿರಪರಾಧಿಗಳು, ನಮ್ಮನ್ನು  ಸುಮ್ಮನೆ ಬಂಧಿಸಿ ಹಿಂಸೆ ನೀಡಲಾಗುತ್ತಿದೆ. ಹಣ ಕೊಡುತ್ತೇವೆ , ಒಪ್ಪಿಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ’ ಎಂದು ಎಸ್‌ಐಟಿ ವಿರುದ್ಧ ಆರೋಪ ಮಾಡಿದ್ದಾರೆ. 

‘ಕೊಲೆ ಒಪ್ಪಿಕೊಳ್ಳಿ ಇಲ್ಲವಾದಲ್ಲಿ ನಿಮ್ಮ ಅಣ್ಣ,ತಮ್ಮಂದಿರನ್ನು ಫಿಟ್‌ ಮಾಡುತ್ತೇವೆ’ ಎಂದು ಹೆದರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನೋರ್ವ ಆರೋಪಿ ಮನೋಹರ್‌ ಯಾವ್ಡೇ ಮಾತನಾಡಿ ‘ನಮಗೆ ಇಲ್ಲಿರುವವರ ಯಾರ ಪರಿಚಯವೂ ಇಲ್ಲ. ಗೌರಿ ಲಂಕೇಶ್‌ ಯಾರು ಅಂತಾನೇ ಗೊತ್ತಿರಲಿಲ್ಲ. ನಮ್ಮ ಮೇಲೆ ಎಸ್‌ಐಟಿ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ. 

ಆರೋಪಿಗಳ ನ್ಯಾಯಾಂಗ ಬಂಧನ ಮುಕ್ತಾಯವಾದ ಹಿನ್ನಲೆಯಲ್ಲಿ ಕೋಕಾ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಕರೆದೊಯ್ಯುವ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next