Advertisement

ಐಟಿ ದಾಳಿಗೆ ರಾಜಕೀಯ ಉತ್ತರ ಕೊಡ್ತೇವೆ: ರೇವಣ್ಣ

08:21 AM Mar 30, 2019 | Vishnu Das |

ಕಡೂರು: ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳು, ನಾಯಕರು ಮತ್ತವರ ಸಂಬಂ ಧಿಕರನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆದಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಆರೋಪಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಈ ಐಟಿ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು.ಇದರ ಹಿಂದೆ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೇರ ಹಸ್ತಕ್ಷೇಪವಿದೆ. ಇದಕ್ಕೆ ರಾಜಕೀಯ ವಾಗಿಯೇ ಉತ್ತರ ನೀಡಲಾಗುವುದು. ಹಾಸನ, ಶಿವಮೊಗ್ಗ, ಮಂಡ್ಯ ಅಭ್ಯರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ ಅವರು, ಈ ದಾಳಿ ನಡೆಸಲು ಪ್ರೇರಣೆ ನೀಡಿದ  ಡಿಯೂರಪ್ಪನವರು, 24 ಗಂಟೆಯೊಳಗೆ ಕ್ಲೀನ್‌ಚಿಟ್‌ ಸರ್ಟಿಫಿಕೇಟ್‌ ಕೊಡಿಸುತ್ತಾರಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next