Advertisement

Wayanad; 29 ಗಂಟೆಗಳ ಕಾಲ ಚಿತ್ರಹಿಂಸೆಯಿಂದ ನೊಂದು ನೇಣಿಗೆ ಶರಣಾದ ವಿದ್ಯಾರ್ಥಿ

01:06 AM Apr 08, 2024 | Team Udayavani |

ವಯನಾಡ್‌: ಕೇರಳದ ವಯನಾಡ್‌ನ‌ ಕಾಲೇಜ್‌ ಹಾಸ್ಟೆಲ್‌ನಲ್ಲಿ ಫೆ.18 ರಂದು ಅತ್ಮಹತ್ಯೆ ಮಾಡಿಕೊಂಡ ಪಶು ವೈದ್ಯಕೀಯ ಪದವಿ ವಿದ್ಯಾರ್ಥಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳು ನಿರಂತರವಾಗಿ 29 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದರು ಎಂಬ ಮಾಹಿತಿ ಪೊಲೀಸ್‌ ವರದಿಯಿಂದ ಬಹಿರಂಗವಾಗಿದೆ.

Advertisement

ಹಾಸ್ಟೆಲ್‌ನ ಶೌಚಾಲಯದಲ್ಲಿ ತಿರುವನಂತಪುರದ ನಿವಾಸಿ, ವಿದ್ಯಾರ್ಥಿ ಸಿದ್ಧಾರ್ಥ ಜೆ.ಎಸ್‌.(20) ಮೃತದೇಹ ಪತ್ತೆಯಾಗಿತ್ತು. ಸಿಪಿಎಂ ವಿದ್ಯಾರ್ಥಿ ಘಟಕವಾದ ಎಸ್‌ಎಫ್ಐ ಕಾರ್ಯಕ ರ್ತರು ಸಿದ್ಧಾರ್ಥಗೆ ರ್ಯಾಗಿಂಗ್‌ ಮಾಡಿ ದ್ದೇ ಆತ್ಮಹತ್ಯೆಗೆ ಕಾರಣ ಎಂದು ಸಿದ್ಧಾರ್ಥ್ ಕುಟುಂಬಸ್ಥರು ಆರೋಪಿಸಿ ದ್ದರು. ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.

ಕೇರಳ ಪೊಲೀಸರ ವರದಿ ಪ್ರಕಾರ, ಫೆ.16ರ ಬೆಳಗ್ಗೆ 9 ಗಂಟೆಯಿಂದ ಫೆ.17ರ ಮಧ್ಯರಾತ್ರಿ 2 ಗಂಟೆವರೆಗೆ ಸಿದ್ಧಾರ್ಥ್ಗೆ ಹಿರಿಯ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳು ಬೆಲ್ಟ್ ಮತ್ತು ಕೈಗಳಿಂದ ನಿರಂತರವಾಗಿ ಹಲ್ಲೆ ನಡೆಸಿ ದ್ದಾರೆ. ಹೀಗಾಗಿ ತೀವ್ರ ಮಾನಸಿಕ ಒತ್ತಡದಿಂದ ಫೆ.18ರಂದು ಮಧ್ಯಾಹ್ನ 1 ಗಂಟೆಗೆ ಹಾಸ್ಟೆಲ್‌ನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next