Advertisement

Kejriwal ಬಿಡುಗಡೆಗೆ ಪಿಐಎಲ್‌: ವಿದ್ಯಾರ್ಥಿಗೆ 75,000 ದಂಡ

01:29 AM Apr 23, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಸಿಎಂ ಕೇಜ್ರಿವಾಲ್‌ ಅವರನ್ನು ಬಿಡುಗಡೆ ಮಾಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ವಜಾಗೊಳಿಸಿದೆ. ಅಲ್ಲದೇ ಅರ್ಜಿ ಸಲ್ಲಿಸಿದ ಕಾನೂನು ವಿದ್ಯಾರ್ಥಿಗೆ 75 ಸಾವಿರ ರೂ. ದಂಡ ವಿಧಿಸಿದೆ.

Advertisement

ಕೇಜ್ರಿವಾಲ್‌ ತಮ್ಮ ಅಧಿಕಾರ ಅವಧಿ ಪೂರೈಸುವವರೆಗೆ ಹಾಗೂ ಪ್ರಕರಣಗಳ ವಿಚಾರಣೆ ಮುಗಿಯುವವರೆಗೆ ಅವರನ್ನು ಎಲ್ಲ ಕ್ರಿಮಿನಲ್‌ ಪ್ರಕರಣಗಳಿಂದ ಬಿಡುಗಡೆಗೊಳಿಸಬೇಕು ಎಂದು ಕೋರಿ 4ನೇ ವರ್ಷದ ಕಾನೂನು ವಿದ್ಯಾರ್ಥಿಅರ್ಜಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿಯನ್ನು ವಜಾ ಗೊಳಿಸಿ ದಂಡ ವಿಧಿಸಿದೆ. ಕೇಜ್ರಿವಾಲ್‌ ಅವರು ನ್ಯಾಯಾಂಗ ಬಂಧನದಲ್ಲಿರುವು ದರಿಂದ ಪ್ರಸ್ತುತ ಅರ್ಜಿಯನ್ನು ನಿರ್ವ ಹಣೆ ಮಾಡಲು ಸಾಧ್ಯವಿಲ್ಲ ಎಂದಿತು.

ವೈದ್ಯರ ಜತೆ ವೀಡಿಯೋ ಸಂಪರ್ಕ: ಪ್ರತಿದಿನ ಕುಟುಂಬದ ವೈದ್ಯರ ಜತೆ ವೀಡಿಯೋ ಕಾಲ್‌ನಲ್ಲಿ ಮಾತನಾಡಲು ಕೋರಿದ್ದ ಕೇಜ್ರಿವಾಲ್‌ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ. ಆದರೆ ಕೇಜ್ರಿ ವಾಲ್‌ ಅವರ ಸಕ್ಕರೆ ಕಾಯಿಲೆ ಕಡಿಮೆ ಯಾಗಲು ಇನ್ಸುಲಿನ್‌ ಆವಶ್ಯಕತೆ ಇದೆ ಯೇ ಎಂಬುದನ್ನು ಪರೀಕ್ಷೆ ಮಾಡಲು ಏಮ್ಸ್‌ನ ತಜ್ಞ ವೈದ್ಯರ ತಂಡವನ್ನು ನೇಮಿಸಬೇಕು ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next