Advertisement

Amethi ಬಳಿಕ ವಯನಾಡಲ್ಲೂ ರಾಹುಲ್‌ಗೆ ಸೋಲು: ಮೋದಿ

08:52 AM Apr 21, 2024 | Team Udayavani |

ನಾಂದೇಡ್‌: ಅಮೇಠಿಯಲ್ಲಿ ಸೋತಿರುವ ಕಾಂಗ್ರೆಸ್‌ನ ರಾಜಕುಮಾರ(ರಾಹುಲ್‌ ಗಾಂಧಿ) ಕೇರಳದ ವಯ ನಾಡಿನಲ್ಲೂ ಸೋಲಲಿದ್ದು, ಅವರು ಮತ್ತೂಂದು ಸುರ ಕ್ಷಿತ ಕ್ಷೇತ್ರವನ್ನು ಹುಡುಕಿ ಕೊಳ್ಳು ವುದು ಒಳ್ಳೆಯದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ನಾಂದೇಡ್‌ನ‌ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿ ಸೋನಿಯಾ ಗಾಂಧಿಯನ್ನು ಟೀಕಿಸಿದರು. ಕೆಲವರಿಗೆ ಲೋಕಸಭೆ ಚುನಾವಣೆಯನ್ನು ಎದುರಿಸುವ ಧೈರ್ಯವಿಲ್ಲ, ಹಾಗಾಗಿ ರಾಜ್ಯಸಭೆಯ ದಾರಿ ಹಿಡಿದಿದ್ದಾರೆಂದು ದೂರಿದರು. ಕೇರಳದಲ್ಲಿ ಎ.26ರಂದು ಮತದಾನ ನಡೆಯಲಿದೆ. ಅಲ್ಲಿ ಯಾವ ರೀತಿಯಲ್ಲಿ ಮತದಾನ ಆಗಲಿದೆ ಎಂಬುದನ್ನು ಕಾಂಗ್ರೆಸ್‌ ನಾಯಕರು ಕಾಯುತ್ತಿದ್ದಾರೆ. ಅದರ ಆಧಾರದಲ್ಲಿ ರಾಹುಲ್‌ಗಾಗಿ ಹೊಸ ಕ್ಷೇತ್ರ ಶೋಧಿಸಬ ಹುದು ಎಂದು ಲೇವಡಿ ಮಾಡಿದ್ದಾರೆ.

ಸೋಲೊಪ್ಪಿಕೊಂಡ ಕಾಂಗ್ರೆಸ್‌: ಮೊದಲ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ ತನ್ನ ಸೋಲೋಪ್ಪಿಕೊಂಡಿದೆ. ಬಿಜೆಪಿಯ ಬೂತ್‌ ಮಟ್ಟದಲ್ಲಿ ವಿಶ್ಲೇಷಣೆ ನಡೆಸಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಬಿಜೆಪಿಗೆ ಮತ ನೀಡಿರುವುದು ತಿಳಿದುಬಂದಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next