Advertisement

ಶೀಘ್ರ ನದಿಗೆ ನೀರು: ಕುಮಠಳ್ಳಿ

05:11 PM Apr 27, 2020 | Suhan S |

ಅಥಣಿ: ಬೇಸಿಗೆ ಸಂದರ್ಭದಲ್ಲಿ ಅಥಣಿ ಮತ್ತು ಜಮಖಂಡಿ ಭಾಗದಲ್ಲಿ ಕೃಷ್ಣಾ ನದಿ ನೀರು ಬರಿದಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್‌ನಿಂದ ಹಿಪ್ಪರಗಿ ಬ್ಯಾರೇಜ್‌ಗೆ ನೀರು ಹರಿಸಲಾಗುತ್ತದೆ ಎಂದು ಶಾಸಕ ಮಹೇಶ್‌ ಕುಮಠಳ್ಳಿ ದರೂರ ಗ್ರಾಮದಲ್ಲಿ ತಿಳಿಸಿದರು.

Advertisement

ಹಿಪ್ಪರಗಿ ಬ್ಯಾರೇಜ್‌ ಕೆಳಭಾಗದ ನಲವತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವುದರಿಂದ ರಾಜಾಪುರ ಬ್ಯಾರೇಜ್‌ನಿಂದ ಹರಿದು ಬಂದಿರುವ ನೀರನ್ನು ಹಾಗೂ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಸದ್ಯ ಇರುವ ನೀರನ್ನು ಹಿಪ್ಪರಗಿ ಬ್ಯಾರೇಜ್‌ ಮೇಲ್ಗಡೆ ರೈತರಿಗೆ ಯಾವುದೇ ತೊಂದರೆಯಾಗದಂತೆ ಕೆಳಗಿನ ಭಾಗದ ಕೃಷ್ಣಾ ನದಿಗೆ ಮೇ ತಿಂಗಳ ಮೊದಲನೇ ವಾರ ಹರಿಸಲಾಗುವುದು ಎಂದು ಮಹೇಶ್‌ ಕುಮಠಳ್ಳಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next