Advertisement

ಎಡದಂಡೆ ಮುಖ್ಯ ಕಾಲುವೆಗೆ 6ರ ವರೆಗೆ ನೀರು ಪೂರೈಕೆ

03:15 PM Apr 04, 2022 | Team Udayavani |

ನಾರಾಯಣಪುರ: ಬಸವಸಾಗರ ಜಲಾಶಯದ ಎಡದಂಡೆ ಮುಖ್ಯ ಕಾಲುವೆಗೆ ಏ. 6ರವರೆಗೆ ನೀರು ಹರಿಸಲಾಗುತ್ತದೆ ಎಂದು ಅಣೆಕಟ್ಟು ವಿಭಾಗದ ಎಕ್ಸಿಕ್ಯೂಟಿವ್‌ ಎಂಜನಿಯರ್‌ ಶಂಕರ ನಾಯ್ಕೋಡಿ ಮಾಹಿತಿ ನೀಡಿದ್ದಾರೆ.

Advertisement

ಈಗಾಗಲೇ ಹಿಂಗಾರು ಹಂಗಾಮಿನ ಬೆಳೆಗಳ ಸಂರಕ್ಷಣೆ, ಕೆರೆಗಳು ಹಾಗೂ ಇಂಪೌಂಡಿಂಗ್‌ ರಿಸರವೈಯರ್‌ ತುಂಬಿಸಿಕೊಳ್ಳಲು ಅಚ್ಚುಕಟ್ಟು ಭಾಗದ ಶಾಸಕರು, ರೈತರು ಹಾಗೂ ರೈತ ಸಂಘಟನೆಗಳು ಏ. 4ರಿಂದ ಏ. 10ರವರಗೆ ಕಾಲುವೆಗಳಿಗೆ ನೀರನ್ನು ಹರಿಸುವಂತೆ ಮನವಿ ಮಾಡಿದೆ.

ಹೀಗಾಗಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಗೋವಿಂದ ಕಾರಜೋಳ ಅವರ ನಿರ್ದೇಶನದಂತೆ ಜಲಾಶಯದಲ್ಲಿ ಉಳಿತಾಯವಾದ ನೀರನ್ನು ಏ. 4ರಿಂದ ಏ. 6ರವರೆಗೆ 3 ದಿನಗಳವರೆಗೆ ನೀರು ಹರಿಸಲಾಗುತ್ತದೆ. ಈ ಹಿಂದೆ ಹಿಂಗಾರು ಹಂಗಾಮಿಗೆ ನೀರು ಹರಿಸಲು ಕರೆಯಲಾದ ನೀರಾವರಿ ಸಲಹಾ ಸಮಿತಿ ಸಭೆ ನಿರ್ದೇಶನದಂತೆ ಮುಖ್ಯ ಕಾಲುವೆಗಳಿಗೆ ಏ. 3ರವರೆಗೆ ನೀರು ಹರಿಸಿ ಬಳಿಕ ನೀರು ಸ್ಥಗಿತಗೊಳಿಸಲು ಹೇಳಲಾಗಿತ್ತು ಎಂದು ಪತ್ರಿಕೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next