Advertisement

ನೀರು, ಬೆಳಕು ಹೊಸತನದ ಸಂಕೇತ: ಡಾ|ಸದಾನಂದ 

05:11 PM Mar 31, 2018 | |

ಹಳೆಯಂಗಡಿ: ನೀರು ಮತ್ತು ಬೆಳಕು ಜೀವನದಲ್ಲಿ ಹೊಸತನವನ್ನು ಮೂಡಿಸುತ್ತದೆ ಎನ್ನುವುದಕ್ಕೆ ಸತ್ಯವೇದದಲ್ಲಿ ಅನೇಕ ಪುರಾವೆಗಳಿದೆ. ಯೇಸು ಕ್ರಿಸ್ತನ ಜೀವನದಲ್ಲಿ ಕೂಡ ರಕ್ತ, ನೀರು ಮತ್ತು ಬೆಳಕು ಹೊಸತವನ್ನು ಮೂಡಿಸಿದೆ. ಎಂದು ಚರ್ಚ್‌ನ ಆಫ್‌ ಸೌತ್‌ ಇಂಡಿಯಾದ ಸಿ ವಿಂಗ್‌ನ ಪ್ರಧಾನ ಕಾರ್ಯದರ್ಶಿ ರೆ.ಡಾ.ಡಿ.ಆರ್‌. ಸದಾನಂದ ಹೇಳಿದರು.

Advertisement

ಹಳೆಯಂಗಡಿಯ ಸಿ.ಎಸ್‌.ಐ. ಅಮ್ಮನ್‌ ಮೆಮೋರಿಯಲ್‌ ಚರ್ಚ್‌ನಲ್ಲಿ ಮಾ.30ರಂದು ನಡೆದ ಕ್ರೈಸ್ತರ ಶ್ರೇಷ್ಠ ಪವಿತ್ರ ದಿನವಾದ ಶುಭ ಶುಕ್ರವಾರದ ವಿಶೇಷ ಪ್ರಾರ್ಥನೆಯಲ್ಲಿ ಅವರು ಮಾತನಾಡಿದರು.

ಸಭಾ ಪಾಲಕರಾದ ರೆ| ಫಾ| ಸೆಬಾಸ್ಟಿನ್‌ ಜತ್ತನ್ನ ಅವರು ಆರಾಧನೆಯ ವಿಧಿ ವಿಧಾನವನ್ನು ನಡೆಸಿಕೊಟ್ಟರು. ಸ್ಥಳೀಯ ಕ್ರೈಸ್ತ ಬಾಂಧವರಿಂದ ವಿಶೇಷ ಸಂಗೀತ ಸಭಾ ಕಾರ್ಯಕ್ರಮ, ಪವಿತ್ರ ಸಂಸ್ಕಾರ, ಯೇಸು ಕ್ರೂಜೆಯಲ್ಲಿ ಸಪ್ತ ವಾಕ್ಯಗಳ ಧ್ಯಾನ ನಡೆಸಲಾಯಿತು. 

ಪುಷ್ಪಲತಾ ಜತ್ತನ್ನ, ಜಾಫ್ರಿ  ಕೋಟ್ಯಾನ್‌, ಜ್ಯೋತಿ ಸಿಡ್ನಿ ಕರ್ಕಡ, ವಿನುತಾ ಗೋಡ್ವಿನ್‌ ಕರ್ಕಡ, ಲಾವಣ್ಯ ಆಲ್ವೀನ್‌ ಕೋಟ್ಯಾನ್‌, ಮೋಸೆಸ್‌ ಪಿ. ಅಮ್ಮನ್ನ ವಿವಿಧ ಸಂದೇಶಗಳನ್ನು ವಾಚಿಸಿದರು. ಸಭಾ ಪರಿಪಾಲನ ಸಮಿತಿಯ ವಿಜಯಪ್ರಕಾಶ್‌ ಕರ್ಕಡ, ಎಲಿಜಿಬತ್‌ ಆಂಡ್ರೋಸ್‌, ರೆನಿಟ ಕರ್ಕಡ, ನವೀನ್‌ ಶುಭಕರ್‌ ಕರ್ಕಡ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next