Advertisement

ತುಂಬೆ ಅಣೆಕಟ್ಟಿನಿಂದ ಹರಿದ ನೀರು

11:25 AM Jun 23, 2019 | keerthan |

ಬಂಟ್ವಾಳ: ಜಿಲ್ಲೆಯ ಜೀವ ನದಿ ನೇತ್ರಾವತಿಯಲ್ಲಿ ಹರಿವು ಆರಂಭವಾಗಿದ್ದು ತುಂಬೆ ಅಣೆಕಟ್ಟಿನಲ್ಲಿ 5 ಮೀಟರ್‌ ಎತ್ತರಕ್ಕೆ ನೀರನ್ನು ಕಾಯ್ದುಕೊಂಡು ಗೇಟ್‌ ಸಂಖ್ಯೆ 5ನ್ನು ಒಂದಡಿಯಷ್ಟು ಎತ್ತರಕ್ಕೆ ತೆರೆದು ಹೆಚ್ಚುವರಿ ನೀರನ್ನು ಹರಿಯ ಬಿಡಲಾಗಿದೆ.

Advertisement

ಕಳೆದ ವರ್ಷ ಎಪ್ರಿಲ್‌ನಲ್ಲಿ ಉತ್ತಮ ಮಳೆಯಾಗಿದ್ದು, ಹೆಚ್ಚುವರಿ ನೀರನ್ನು ಮೇ ಅಂತ್ಯದಲ್ಲಿ ಹೊರಗೆ ಬಿಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಮಳೆಯಾಗದೆ ಎಪ್ರಿಲ್‌, ಮೇಯಲ್ಲಿ ಗಂಭೀರ ನೀರಿನ ಸಮಸ್ಯೆ ತಲೆದೋರಿತ್ತು. ಜೂ. 10ರ ತನಕವೂ ನದಿ ತುಂಬಿರಲಿಲ್ಲ. ಅನಂತರ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾದ್ದರಿಂದ ನೀರು ಹರಿದುಬಂದಿತ್ತು. ಜೂ. 20ರಂದು ಶಂಭೂರು ಎಎಂಆರ್‌ ಅಣೆಕಟ್ಟಿನಿಂದಲೂ ನೀರನ್ನು ಹೊರಗೆ ಬಿಡುವ ಮೂಲಕ ವಿದ್ಯುತ್‌ ಉತ್ಪಾದನೆಗೂ ಕ್ರಮ ಕೈಗೊಳ್ಳಲಾಗಿದೆ.

ತುಂಬೆ ಅಣೆಕಟ್ಟಿನಲ್ಲಿ ನೀರು ನಿಲುಗಡೆ ಮಾಡದೇ ಸರಾಗ ಹರಿಯ ಬಿಡುತ್ತಿದ್ದರೆ ಪ್ರಸ್ತುತ ಬಿದ್ದಿರುವ ಮಳೆಯೂ ಮಂಗಳೂರಿಗೆ ಕುಡಿಯುವ ನೀರು ಒದಗಿಸುವಷ್ಟು ಪ್ರಬಲವಲ್ಲ ಎಂದೇ ಸ್ಥಳೀಯರು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next