Advertisement

Water Dispute: ಈಗ ತೀಸ್ತಾ ನದಿ ನೀರಿಗಾಗಿ ಬಾಂಗ್ಲಾದೇಶ ಸರಕಾರ ಕ್ಯಾತೆ

01:13 AM Sep 03, 2024 | Team Udayavani |

ಢಾಕಾ: ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿ ಭಾರತದ ಜತೆ ಮಾತುಕತೆ ನಡೆಸಲಾಗುವುದು ಎಂದು ಬಾಂಗ್ಲಾದೇಶದ ಮಧ್ಯಾಂತರ ಸರಕಾರ ದಲ್ಲಿ ಜಲಸಂಪನ್ಮೂಲ ಇಲಾಖೆಯ ಸಲಹೆಗಾರ್ತಿ ಸೈಯದಾ ರಿಜ್ವಾನ ಹಸನ್‌ ಹೇಳಿದ್ದಾರೆ. ತೀಸ್ತಾ ನದಿಯ ಮೇಲ್ದಂಡೆ ಮತ್ತು ಕೆಳದಂಡೆ ರಾಷ್ಟ್ರಗಳು ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲನೆ ಮಾಡಬೇಕೆಂದೂ ತಿಳಿಸಿದ್ದಾರೆ.

Advertisement

ತೀಸ್ತಾ ಸೇರಿದಂತೆ ಎಲ್ಲ ನದಿಗಳ ನೀರು ಹಂಚಿಕೆಯ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬ ಹು ದಾಗಿದೆ. ಆದರೆ ಉಭಯ ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಡದಿದ್ದರೆ ಬಾಂಗ್ಲಾದೇಶವು ಅಂತಾರಾಷ್ಟ್ರೀಯ ಕಾನೂನುಗಳ ಆಯ್ಕೆಯನ್ನು ಪರಿಗಣಿಸಬಹುದು ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತೀಸ್ತಾ ನದಿ ನೀರು ಹಂಚಿಕೆ ಸಂಬಂಧ ಈಗಾಗಲೇ ಬಾಂಗ್ಲಾ ದೇಶದಲ್ಲಿರುವ ಸಂಬಂಧಿಸಿದವರ ಜತೆ ಮಾತನಾಡಿದ್ದೇನೆ. ತೀಸ್ತಾ ಒಪ್ಪಂದ ಕುರಿತು ನಾವು ಮಾತುಕತೆ ಮತ್ತು ಪ್ರಕ್ರಿಯೆಗಳನ್ನು ಮರು ಆರಂಭಿಸುವ ಅಗತ್ಯದ ಬಗ್ಗೆ ಚರ್ಚಿಸಿದ್ದೇವೆ. ಜತೆಗೆ ಮುಂದಿನ 2 ವರ್ಷಗಳಲ್ಲಿ ಮುಕ್ತಾಯವಾಗಲಿರುವ ಗಂಗಾ ನದಿ ಒಪ್ಪಂದ ಕುರಿತೂ ಮಾತನಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next