Advertisement

“ಗಿಡಗಳನ್ನು ಬೆಳೆಸುವ ಮೂಲಕ ನೀರಿನ ಸಂರಕ್ಷಣೆ ಸಾಧ್ಯ’

12:30 AM Mar 23, 2019 | Team Udayavani |

ಉಡುಪಿ: ಈ ವರ್ಷ ಕರ್ನಾಟಕ ರಾಜ್ಯವನ್ನು ಜಲ ವರ್ಷ ಎಂದು  ಘೋಷಣೆ ಮಾಡಿದೆ. ಜಲ ಅಮೂಲ್ಯವಾಗಿದ್ದು ಅದರ ಸಂರಕ್ಷಣೆ ಮಾಡಬೇಕು. ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ನೀರಿನ ಸಂರಕ್ಷಣೆ ಆಗಬೇಕಿದೆ.

Advertisement

ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಈ ಮೂಲಕ ಜಲವನ್ನು ಸಂರಕ್ಷಣೆ ಕೂಡಾ ಆಗಬೇಕು ಎಂದು ತಾ.ಪಂ. ಇಒ ರಾಜು ಕೆ. ಹೇಳಿದರು. 

ಅವರು ಶುಕ್ರವಾರ ತಾ.ಪಂ. ವಸತಿ ಗೃಹದ ಮುಂಬಾಗ ನಡೆದ ವಿಶ್ವಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಪ್ರದೇಶವು ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಜಲವನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಾಗುವ ನೀರಿನ ಸಮಸ್ಯೆಯನ್ನು ತಡೆಯಬಹುದು. ಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಹಸಿರಾಗಿ ಮಾಡಬೇಕು ಎಂದರು. 

ತಾ.ಪಂ. ವ್ಯವಸ್ಥಾಪಕ ರಾಮದಾಸ್‌ ಜಲ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿಇಒ ಮಂಜುಳಾ ಕೆ., ಬಿ.ಆರ್‌.ಸಿಯ ಸಮನ್ವಯಾಧಿಕಾರಿ ಉಮಾ ಪಿ, ಬ್ರಹ್ಮಾವರ ಸಿಡಿಪಿಒ ಶೋಭಾ, ಉಡುಪಿ ಸಿಡಿಪಿಒ ವೀಣಾ, ಸಾಮಾಜಿಕ ಕಾರ್ಯಕರ್ತ ಪ್ರಭಾಕರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next