Advertisement

ಮದ್ದೂರು ಪುರಸಭೆಯಿಂದ ತ್ಯಾಜ್ಯ ವಿಲೇವಾರಿ ಜಾಗೃತಿ ಜಾಥಾ

03:57 PM Feb 01, 2020 | Suhan S |

ಮದ್ದೂರು: ಪುರಸಭೆ ಹಾಗೂ ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಘನ ತ್ಯಾಜ್ಯ ವಸ್ತು ವಿಲೇವಾರಿ ಕುರಿತಾದ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಗಣೇಶ್‌ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರು ಸ್ಥಳೀಯವಾಗಿ ಪರಿಸರ ಸ್ವಚ್ಛತೆಗೆ ಪುರಸಭೆ ಸಿಬ್ಬಂದಿ ಜತೆ ಕೈಜೋಡಿಸುವ ಜತೆಗೆ ಘನತ್ಯಾಜ್ಯ ವಸ್ತು ವಿಂಗಡಿಸಿ ಸೂಕ್ತ ರೀತಿ ವಿಲೇವಾರಿ ಮಾಡಬೇಕೆಂದರು. ಮದ್ದೂರು ಪುರಸಭೆ ವ್ಯಾಪ್ತಿಯ 8 ಸಾವಿರಕ್ಕೂ ಹೆಚ್ಚು ವಾಸದ ಮನೆ, ವ್ಯಾಪಾರ ಕೇಂದ್ರ, ಅಂಗಡಿ ಮತ್ತಿತರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಸಂಬಂಧ ಜಾಗೃತಿ ಮೂಡಿಸುವ ಪ್ರಚಾರ ಸಂಬಂಧದ ಸ್ಟಿಕರ್‌ ಅಳವಡಿಸುವ ಕಾರ್ಯಕ್ಕೂ ಇದೇ ವೇಳೆ ಚಾಲನೆ ನೀಡಲಾಯಿತು.

ನ್ಯಾಯಾಧೀಶರಾದ ಆದಿತ್ಯ.ಆರ್‌.ಕಲಾಲ್‌, ಶಿವಕುಮಾರ್‌, ಸೋಮನಾಥ್‌, ಪಿ.ಎಂ.ಸುಬ್ರಮಣಿ, ವಕೀಲರ ಸಂಘದ ಅಧ್ಯಕ್ಷ ಜಿ.ಎನ್ .ಸತ್ಯ, ಪುರಸಭೆ ಮುಖ್ಯಾಧಿಕಾರಿ ಮುರುಗೇಶ್‌, ವ್ಯವಸ್ಥಾಪಕ ಎಲ್‌.ಚಂದ್ರಶೇಖರ್‌, ಪರಿಸರ ಅಭಿಯಂತರ ನಾಗೇಂದ್ರ, ಪ್ರಾಂಶುಪಾಲ ನಟರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next