Advertisement

ಉಗ್ರರ ಗುಂಡಿಗೆ ಯೋಧ ಹುತಾತ್ಮ

10:42 PM Dec 16, 2019 | Team Udayavani |

ಚಿಕ್ಕೋಡಿ: ಮಹಾರಾಷ್ಟ್ರದ ಗಡಹಿಂಗ್ಲಜ್‌ ತಾಲೂಕಿನ ಮಾಗಾವ ಗ್ರಾಮದ ಯೋಧ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮನಾಗಿದ್ದಾನೆ. ರಾಜ್ಯದ ಸಂಕೇಶ್ವರ ಪಟ್ಟಣದಿಂದ 10 ಕಿಮೀ ದೂರದ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಗಡಹಿಂಗ್ಲಜ್‌ ತಾಲೂಕಿನ ಮಾಗಾವ ಗ್ರಾಮದ ಜ್ಯೋತಿಬಾ ಗಣಪತಿ ಚೌಗಲೆ(36) ಹುತಾತ್ಮ ಯೋಧ.

Advertisement

ಜಮ್ಮು ಕಾಶ್ಮೀರದ ರಜೌರಿಯಲ್ಲಿ ಸೋಮವಾರ ಬೆಳಗ್ಗೆ ಉಗ್ರರು ಮತ್ತು ಭಾರತೀಯ ಯೋಧರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದಾನೆ. 2009ರಲ್ಲಿ ಜ್ಯೋತಿಬಾ ಸೇನೆ ಸೇರ್ಪಡೆಯಾಗಿದ್ದ. ಯೋಧನ ಪಾರ್ಥಿವ ಶರೀರ ಮಂಗಳವಾರ ಅಥವಾ ಬುಧವಾರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next