Advertisement

ವಾರಂಟ್‌ ಆರೋಪಿ 1 ವರ್ಷ ಬಳಿಕ ಸೆರೆ

10:57 PM Mar 24, 2023 | Team Udayavani |

ಮಂಗಳೂರು: ವಿವಿಧ 9 ಪ್ರ‌ರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು ವರ್ಷದಿಂದ ತಲೆಮರೆಸಿಕೊಂಡಿದ್ದ ಸಂತೋಷ್‌ ಅಲಿಯಾಸ್‌ ಸಂತು (36) ಎಂಬವನನ್ನು ಕೊಣಾಜೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Advertisement

ಬಂಟ್ವಾಳದ ಮುಗ್ಧಾಲ್‌ಗ‌ುಡ್ಡೆ ಮನೆ ನಿವಾಸಿಯಾದ ಈತ ಮಂಗಳೂರು ನಗರ, ದ.ಕ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಒಂದು ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್‌ ಹೊಂದಿದ್ದ.

ಮಂಗಳೂರು ಪೊಲೀಸ್‌ ಆಯುಕ್ತರ ಆದೇಶದ ಮೇರೆಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಧನ್ಯ ಎನ್‌. ನಾಯಕ ಅವರ ನಿರ್ದೇಶನದಂತೆ ಕೊಣಾಜೆ ಪೊಲೀಸ್‌ ಠಾಣೆಯ ನಿರೀಕ್ಷಕರಾದ ಕೀರ್ತಿಕುಮಾರ್‌, ಪೊಲೀಸ್‌ ಉಪ ನಿರೀಕ್ಷಕರಾದ ಅಶೋಕ್‌, ಸಿಬಂದಿಗಳಾದ ಎಚ್‌.ಸಿ. ಶೈಲೇಂದ್ರ, ಶಿವಕುಮಾರ್‌, ಪುರೊಷೋತ್ತಮ್‌ ಅವರ ತಂಡ ಆರೋಪಿಯನ್ನು ದಸ್ತಗಿರಿ ಮಾಡಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next