Advertisement

ನಾಗರ ಹಾವು ಮತ್ತು ನಾಯಿ ನಡುವೆ ಘೋರ ಕಾದಾಟ: ಎರಡೂ ಜೀವ ಅಂತ್ಯ

06:40 PM Jan 28, 2022 | Team Udayavani |

ಸಕಲೇಶಪುರ: ಹಾವು-ಮುಂಗುಸಿ ಬದ್ದ ವೈರಿಗಳು ಎಂಬ ಮಾತು ಸಾಮಾನ್ಯವಾಗಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಹಾವು ಮತ್ತು ನಾಯಿಗಳು ವೈರಿಗಳಾಗಿರುವ ದೃಶ್ಯ ಹೆಚ್ಚು ಕಂಡು ಬರುತ್ತಿದ್ದು ಹಾವು ಮತ್ತು ನಾಯಿಯ ನಡುವೆ ಕಾದಾಟ ನಡೆದು ಎರಡೂ ಪ್ರಾಣಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

Advertisement

ತಾಲ್ಲೂಕಿನ ಶುಕ್ರವಾರಸಂತೆ ಗ್ರಾಮದಲ್ಲಿ ಗುರುವಾರ ಗ್ರಾಮದ ಮಂಜುನಾಥ್ ಎಂಬುವವರು ತಮ್ಮ ಜಮೀನಿಗೆ ಹೋಗುವ ವೇಳೆ ಅವರೊಂದಿಗೆ ಸಾಕಿದ ನಾಯಿಯು ಸಹ ತೆರಳಿತ್ತು ದಾರಿ ಮದ್ಯೆ ನಾಗರಹಾವೊಂದು ಎದುರಾಗಿದ್ದು, ಈ ವೇಳೆ ಮಂಜುನಾಥ್ ನಾಯಿಯನ್ನು ಕರೆದರು ಸಹ ನಾಯಿ ಬರದೆ ಹಾವಿನ ಜೊತೆ ಸೆಣೆಸಾಡಲು ನಿಂತಿದೆ.

ಮೊದಲಿಗೆ ನಾಯಿ ಹಾವನ್ನು ಕಚ್ಚಿದರೆ ನಂತರ ಹಾವು ನಾಯಿಯನ್ನು ಕಚ್ಚಿದೆ. ಇದೇ ರೀತಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಪರಸ್ಪರ ಕಾದಾಟ ನಡೆಸಿದ ನಂತರ ಮೊದಲಿಗೆ ನಾಯಿ ನಿತ್ರಾಣಗೊಂಡು ನೆಲಕ್ಕೆ ಒರಗಿದರೆ ನಂತರ ತೀವ್ರ ಪ್ರಮಾಣದಲ್ಲಿ ಗಾಯಗೊಂಡಿದ್ದ ಹಾವು ಸಹ ಮೃತಪಟ್ಟಿದೆ. ಹಾವು ತನ್ನ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿ ಹೋರಾಟ ಮಾಡಿ ಜೀವ ಬಿಟ್ಟರೆ, ನಾಯಿ ಸಹ ಹಾವಿನ ಮೇಲೆ ಕಿಡಿ ಕಾರಿ ಪ್ರಾಣ ಬಿಟ್ಟಿದೆ. ಈ ಸಂ‘ರ್ದಲ್ಲಿ ನಾಯಿಯ ಮಾಲಿಕ ಗಾಬರಿಯಾದರೂ ಸಹ ಇವೆರಡರ ನಡುವಿನ ಸೆಣಸಾಟವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದು ಹೀಗೆ ಒಬ್ಬರಿಂದ ಒಬ್ಬರಿಗೆ ವಿಡಿಯೋ ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next