Advertisement

“ಅಮ್ಮನ ಬಳಿಗೆ ಕರೆದೊಯ್ಯಿರಿ’

12:53 AM Sep 30, 2021 | Team Udayavani |

ಶ್ರೀನಗರ: “ದಯವಿಟ್ಟು ನನ್ನನ್ನು ತಾಯಿಯ ಬಳಿಗೆ ಕರೆದುಕೊಂಡು ಹೋಗಿ’ ಹೀಗೆಂದು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೆರೆ ಸಿಕ್ಕಿರುವ ಪಾಕಿಸ್ಥಾನದ ಉಗ್ರ ಅಲಿ ಬಾಬರ್‌ ಪಾತ್ರ ಅಲವತ್ತುಕೊಂಡಿದ್ದಾನೆ.

Advertisement

ಸೇನಾಧಿಕಾರಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿಯ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಲಷ್ಕರ್‌-ಎ-ತಯ್ಯಬಾ (ಎಲ್‌ಇಟಿ) ಸಂಘಟನೆಯ ಏರಿಯಾ ಕಮಾಂಡರ್‌, ಐಎಸ್‌ಐ, ಪಾಕಿಸ್ಥಾನ ಸೇನೆಗೆ ತನ್ನನ್ನು ವಾಪಸ್‌ ಕರೆದುಕೊಂಡು ಹೋಗುವಂತೆ ಅದರಲ್ಲಿ ಮನವಿ ಮಾಡಿದ್ದಾನೆ.

ಭಾರತದ ಯೋಧರು ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ತಪಾತ ನಡೆಸುತ್ತಿದ್ದಾರೆ ಎಂದು ತನಗೆ ತಿಳಿಸಲಾಗಿತ್ತು. ಆದರೆ, ಇಲ್ಲಿ ನೋಡಿದರೆ ಎಲ್ಲವೂ ಶಾಂತವಾಗಿದೆ ಎಂದು ಆತ ತಿಳಿಸಿದ್ದಾನೆ.

ಇದನ್ನೂ ಓದಿ:ಕೋವಿಡ್‌ ಬದಲು ರೇಬೀಸ್‌ ಲಸಿಕೆ; ಡಾಕ್ಟರ್‌, ನರ್ಸ್‌ ಅಮಾನತು

Advertisement

Udayavani is now on Telegram. Click here to join our channel and stay updated with the latest news.

Next