Advertisement

ಕುಡಿವ ನೀರಿಗಾಗಿ ಅಲೆದಾಟ

05:33 AM May 23, 2020 | Team Udayavani |

ಕಾರಟಗಿ: ಪಟ್ಟಣದ 31ನೇ ವಿತರಣಾ ಕಾಲುವೆ ಬಳಿ ಪುರಸಭೆ ಮಳಿಗೆಯಲ್ಲಿನ ಶುದ್ಧ ನೀರಿನ ಘಟಕ ಐದು ದಿನಗಳಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಕುಡಿವ ನೀರಿಗಾಗಿ ಅಲೆದಾಡುವಂತಾಗಿದೆ. ವಿದ್ಯುತ್‌ ಪರಿವರ್ತಕ ಸುಟ್ಟಿದ್ದರಿಂದ ಶುದ್ಧ ನೀರು ಘಟಕಕ್ಕೆ ಕೊಳವೆಬಾವಿಯಿಂದ ನೀರು ಸರಬರಾಜು ಆಗುತ್ತಿಲ್ಲ. ಹೀಗಾಗಿ ಶುದ್ಧ ನೀರು ಘಟಕ ಬಂದ್‌ ಆಗಿದೆ.

Advertisement

ಶುದ್ಧ ನೀರು ಘಟಕ ನಿರ್ವಹಣೆ ಮಾಡುವವರು ಕೂಡ ಈ ಬಗ್ಗೆ ಗಮನಹರಿಸದೇ ವಿದ್ಯುತ್‌ ಪರಿವರ್ತಕ ಸುಟ್ಟಿದೆ ಎಂದು ಕೈತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನ ಕುಡಿವ ನೀರಿಗಾಗಿ ಕಿ.ಮೀ. ಗಟ್ಟಲೇ ಅಲೆದಾಡುವಂತಾಗಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಎನ್‌. ಶಿವಲಿಂಗಪ್ಪ ಕೂಡಲೇ ವಿದ್ಯುತ್‌ ಪರಿವರ್ತಕ ದುರಸ್ತಿಗೊಳಿಸಲು ಸಂಬಂಧಿಸಿದವರಿಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next