Advertisement
ಮೃತರು ಹೆಬ್ಬಾರಬೈಲು ನಿವಾಸಿ ಪಾರ್ವತಿ(65ವ) ಮತ್ತು ಅವರ ಮೊಮ್ಮಗ ಧನುಷ್ (11) ಎನ್ನುವವರಾಗಿದ್ದಾರೆ.
Related Articles
Advertisement
ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಪಕ್ಕದ ಭಾರಿ ಎತ್ತರದ ತಡೆಗೋಡೆ ಕುಸಿದು ಮನೆಯ ಮೇಲೆ ಬಿದ್ದಿದೆ. ಈ ಸಂದರ್ಭ ಮನೆಯ ಒಂದು ಕೊಠಡಿಯಲ್ಲಿ ಪಾರ್ವತಿ ಮತ್ತು ಧನುಷ್ ಮಲಗಿದ್ದರು. ತಡೆಗೋಡೆ ಮಲಗಿದ್ದ ಪಾರ್ವತಿ ಮತ್ತು ಅವರ ಮೊಮ್ಮಗನ ಮೇಲೆ ಬಿದ್ದು ಸಂಪೂರ್ಣ ಮಣ್ಣಿನಲ್ಲಿ ಹೂತುಹೋಗಿದ್ದರು. ಅವರಿಬ್ಬರನ್ನು ತಕ್ಷಣ ಮನೆ ಮಂದಿ,ಸ್ಥಳೀಯರು ಹಾಗೂ ನಗರಸಭೆ ಸಿಬಂದಿಗಳು ಕಾರ್ಯಾಚರಣೆ ನಡೆಸಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಕೂಡಲೆ ನಗರಸಭೆ ವಾಹನದಲ್ಲೇ ಅವರನ್ನು ಪಕ್ಕದ ಆದರ್ಶ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಇಬ್ಬರೂ ಕೊನೆಯುಸಿರೆಳೆದಿದ್ದರು. .
ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ.
ಮೃತ ಪಾರ್ವತಿಯವರು ಪುತ್ರರಾದ ಮಹೇಶ್, ಯೋಗೀಶ್, ಪುತ್ರಿಯರಾದ ಗಾಯತ್ರಿ, ರಾಜೇಶ್ವರಿಯವರನ್ನು ಅಗಲಿದ್ದಾರೆ.
ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.