Advertisement

ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ತಲೆ ಮೇಲೆ ಇಟ್ಟಿಗೆ ಹೊತ್ತು ಪಾದಯಾತ್ರೆ

11:07 AM Aug 20, 2019 | sudhir |

ಚಿಕ್ಕಬಳ್ಳಾಪುರ: ಅಯೋದ್ಯ ಶ್ರೀರಾಮ ಜನ್ಮಸ್ಥಾನದಲ್ಲಿ ಭವ್ಯ ಮಂದಿರ ನಿರ್ಮಾಣವು ಕೋಟ್ಯಾಂತರ ಹಿಂದೂಗಳ ಶ್ರದ್ಧಾ, ನಂಬಿಕೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿದ್ದು ಕೇಂದ್ರ ಸರ್ಕಾರವು ಕೂಡಲೇ ರಾಮ ಮಂದಿರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಹೂಡಿಯಿಂದ ಉತ್ತರಪ್ರದೇಶದ ಅಯೋಧ್ಯಾ ವರೆಗೂ ಎರಡು ಕಲ್ಲಿನ ಇಟ್ಟಿಗೆಯನ್ನು ಹೊತ್ತು ಪಾದಯಾತ್ರೆ ಕೈಗೊಳ್ಳಲಾಗಿದೆ.

Advertisement

ಶ್ರೀರಾಮನ ರಥದೊಂದಿಗೆ ಪಾದಯಾತ್ರೆ ಮಾಡುತ್ತಿರುವ ಮಂಜುನಾಥ್ ಮತ್ತು ಮಂಜಯ್ಯ ಚಿಕ್ಕಬಳ್ಳಾಪುರಕ್ಕೆ ಸೋಮವಾರ ಆಗಮಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷರಾದ ಡಾ.ಬಿ.ವಿ.ಮಂಜುನಾಥ್, ಆರ್ ಎಸ್ ಎಸ್ ಶ್ರೀನಿವಾಸಮೂರ್ತಿ, ಅನಿಲ್, ವಿಕ್ರಂ ,ಬಾಲಚಂದ್ರ ಬಜರಂಗದಳದ ಕಾರ್ತಿಕ್ ಅವರಿಗೆ ಶುಭ ಹಾರೈಸಿ ರಥಕ್ಕೆ ಬಿಳ್ಕೊಡುಗೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next