Advertisement

ನಿನ್ನ ದನಿಗಾಗಿ ನಿನ್ನ ಕರೆಗಾಗಿ ಕಾಯುವೆ….

12:30 AM Jan 29, 2019 | |

ಹಾಯ್‌ ಚಿನ್ನು, 
ನೀನು ನನ್ನನ್ನು ಬಿಟ್ಟು ಹೋಗಿ ಮೂರು ವರ್ಷ ಆಗ್ತಾ ಬಂತು. ಹುಟ್ಟು ಹಬ್ಬಕ್ಕೆ ವಿಶ್‌ ಮಾಡಿಲ್ಲ ಅನ್ನೋದನ್ನೇ ನೆಪವಾಗಿಸಿ, ಬಿಟ್ಟು ಹೋಗಿದ್ದು ಸರೀನಾ ಹೇಳು? ಓದೋದಕ್ಕೆ ಅಂತ ಬೇರೆ ಊರಿಗೆ ಹೋಗಿದ್ದೇ ನಾನು ಮಾಡಿದ ದೊಡ್ಡ ತಪ್ಪು ಅಂತನ್ನಿಸುತ್ತಿದೆ ಈಗ. ನಾನು ಓದಿನಲ್ಲಿ ಬ್ಯುಸಿ ಆಗೋದೆ ನಿಜ. ಹಾಗಂತ, ನಿನ್ನ ಬಗ್ಗೆ ಕಾಳಜಿ ಇಲ್ಲ, ನಿನ್ನ ಬಗ್ಗೆ ನಾನು ಯೋಚನೆ ಮಾಡ್ಲೆ ಇಲ್ಲ ಅಂತ ಅಲ್ಲ. ಓದು, ಅಸೈನ್‌ಮೆಂಟ್‌, ಕ್ಲಾಸ್‌ಗಳ ಒತ್ತಡದಿಂದ ನಿನ್ನ ಬಗ್ಗೆ ಜಾಸ್ತಿ ವಿಚಾರಿಸಿಕೊಳ್ಳೋಕೆ ಆಗ್ತಾ ಇರಲಿಲ್ಲ.

Advertisement

ನನ್ನ ಹುಟ್ಟಿದ ಹಬ್ಬದಂದು ನೀನು ಹನ್ನೆರಡು ಗಂಟೆಗೇ ಕಾಲ್‌ ಮಾಡಿದ್ದೆ. ಆದರೆ, ನಾನು ನಿನ್ನ ಹುಟ್ಟುಹಬ್ಬವನ್ನು ಮರೆತುಬಿಟ್ಟೆ. ಅದು ತಪ್ಪು, ನಿನಗೆ ತುಂಬಾ ಬೇಜಾರಾಗಿರುತ್ತೆ ನಿಜ. ಏನು ಮಾಡ್ಲಿ? ನನ್ನ ಮರೆವಿನ ಬಗ್ಗೆ ನಿನಗೇ ಗೊತ್ತಲ್ವಾ? ನೀನಾಗೇ ಫೋನ್‌ ಮಾಡಿ ನೆನಪು ಮಾಡಬಹುದಿತ್ತು. “ಯಾಕೋ ವಿಷ್‌ ಮಾಡಿಲ್ಲ?’ ಅಂತ ಬೈದು ಕೇಳಬಹುದಿತ್ತು. ಆದ್ರೆ, ನೀನು ನನ್ನ ಹತ್ರ ಮಾತಾಡೋದನ್ನೇ ಬಿಟ್ಟು ಬಿಟ್ಟೆ. ನಾನು ಎಷ್ಟೋ ಸರಿ ಮಾತನಾಡಿಸೋ ಪ್ರಯತ್ನ ಮಾಡಿದೆ. ಆದರೆ, ನೀನು ತಿರುಗಿಯೂ ನೋಡಲಿಲ್ಲ.

ಇವತ್ತಿಗೂ ನಾನು ನಿನ್ನ ನೆನಪಿನಲ್ಲೇ ಇದ್ದೇನೆ. ಓದು ಮುಗಿಸಿ, ಕೆಲಸಕ್ಕೆ ಸೇರಿದ್ದೇನೆ. ನೀನಿಲ್ಲದೆ ಬದುಕು ಖಾಲಿ ಖಾಲಿ. ಇವತ್ತು ಕಾಲ್‌ ಮಾಡ್ತೀಯ, ನಾಳೆ ಮಾಡ್ತೀಯಾ ಅಂತ ನಿನ್ನ ಕರೆಗಾಗಿ ಕಾದು ಕೂತಿದ್ದೇನೆ. ಉಹೂಂ, ನಿನ್ನ ಕೋಪ ಕರಗುತ್ತಲೇ ಇಲ್ಲ. ಹೋಗಲಿ ನಾನೇ ಕಾಲ್‌ ಮಾಡಿ, ಮತ್ತೂಮ್ಮೆ ಮಾತಾಡಿಸೋಕೆ ಪ್ರಯತ್ನಿಸೋಣ ಅಂದ್ರೆ ನಂಬರ್‌ ಬೇರೆ ಬದಲಿಸಿದ್ದೀಯ. ಇಬ್ಬರೂ ಮಾತಾಡಿದರೆ ತಾನೇ ಸಮಸ್ಯೆ ಬಗೆಹರಿಯೋದು? ಅವತ್ತು ನಾನು ವಿಶ್‌ ಮಾಡದೇ ಇದ್ದದ್ದು ತಪ್ಪು. ಅದಕ್ಕಾಗಿ ಮತ್ತೆ ಮತ್ತೆ ಸಾರಿ ಕೇಳಿ, ನಿನ್ನ ಒಂದು ಮಾತಿಗಾಗಿ ನಾನು ಕಾಯುತ್ತಿದ್ದೇನೆ, ಕಾಯುತ್ತಲೇ ಇರುತ್ತೇನೆ. ಆದಷ್ಟು ಬೇಗ ಕಾಲ್‌ ಮಾಡು… 

ಹೇಮಂತ್‌ 

Advertisement

Udayavani is now on Telegram. Click here to join our channel and stay updated with the latest news.

Next